ಗೋಕಾಕಿನಲ್ಲಿ ಧಗಧಗನೆ ಹೊತ್ತಿ ಉರಿದ ಗಾದಿ ಕಾರ್ಖಾನೆ!!!!
ಗಾದಿ ತಯಾರಿಸುವ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ಮಶಿನು,ಗಾದಿ
ಗೋಕಾಕ : ಗಾದಿ ತಯಾರಿಸುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಗೊಡಾವನದಲ್ಲಿದ್ದ ಹತ್ತಿ, ಮಶಿನಗಳು ಸುಟ್ಟು ಬಸ್ಮವಾದ ಘಟನೆ ಗೋಕಾಕ ತಾಲೂಕಿನ ಮಾನಿಕವಾಡಿಯಲ್ಲಿ ನಡೆದಿದೆ.
ಸಂಜೆ 5 ಗಂಟೆಗೆ ಹತ್ತಿದ ಆಕಸ್ಮಿಕ ಬೆಂಕಿ ಕೆಲವೆ ಕ್ಷಣಗಳಲ್ಲಿ ಇಡಿ ಗೊಡಾವನಗೆ ಆವರಿಸಿ ಸುತ್ತಲ್ಲೂ ಬೆಂಕಿ ಹತ್ತಿಕೊಂಡಿದೆ,ಇನ್ನು ಸುದ್ದಿ ತಿಳಿದ ತಕ್ಷಣ ಗೋಕಾಕ ಗ್ರಾಮೀಣ ಪಿ,ಎಸ್,ಐ ಕಿರಣ ಮೊಹಿತೆಯವರು ಅಗ್ನಿ ಶ್ಯಾಮಕ ದಳವರಿಗೆ ಕರೆ ಮಾಡಿ ಕರ್ತವ್ಯ ಮೆರೆದಿದ್ದಾರೆ.
ಮಾನಿಕವಾಡಿಯ ರಹವಾಸಿ ಮಲಿಕ ಮಾನಿಕಸಾಬ ಬೊಜಗಾರ ಇವರ ಮಾಲಿಕತ್ವವದ ಹತ್ತಿಯ ಕಾರ್ಖಾನೆಗಯ ಗೊಡಾವನ ಎಂದು ತಿಳಿದು ಬಂದಿದ್ದು ಅಂದಾಜು 10ಲಕ್ಷ ರೂ ನಷ್ಟ ವಾಗಿದೆ ಎಂದು ತಿಳಿದು ಬಂದಿದೆ.
Laxmi News 24×7