Breaking News

ರಸ್ತೆ ಮೇಲೆ ಹೋಗೆಯುಗಿಳಿದ ಸರ್ಕಾರಿ ಬಸ್;RTO ಅವರೆ ಇದು ರಸ್ತೆ ನಿಯಮ ಉಲ್ಲಂಘನೆ ಅಲ್ವಾ ;ನೆಟ್ಟಿಗರು ಪ್ರಶ್ನೆ

Spread the love

ಅಥಣಿ: ಕೆಎಸ್‌ಆರ್‌ಟಿಸಿ ಬಸ್ಸು ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ…! ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮೇಲೆ ದಂಡ ಬೀಳುತ್ತದೆ. ಆದ್ರೆ ಈ ಸರ್ಕಾರಿ ವಾಹನ ವಿಪರೀತ ಹೊಗೆ ಬಿಡುವುದಕ್ಕೆ ಏನು ದಂಡ..? ಅಂದರೆ ಹೊಗೆ ಬಿಡುವುದಕ್ಕೆ ಅಲ್ಲ ದಂಡ, ಹೊಗೆ ಇಲ್ಲದೇ ಇರುವುದಕ್ಕೆ ದಂಡವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.

ಇದು ಅಥಣಿ ಪಟ್ಟಣದಿಂದ-ಪಾಂಡೆಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ ಎಸ್ ಆರ್ ಟಿ ಸಿ ಬಸ್ ಇದೇನು ರಸ್ತೆ ಮದ್ಯ ಬಸ್ ಕೆಟ್ಟು ಹೋಗಿ ಹೋಗೆ ಬರ್ತಿರೋದಲ್ಲ, ಬದಲಾಗಿ ಅಥಣಿ ಬಸ್ ನಿಲ್ದಾಣದಿಂದಲೆ ಪಟ್ಟಣದುದ್ದಕ್ಕೂ ಈ ರೀತಿಯಾಗಿ ಹೋಗೆ ಉಗುಳುತ್ತ ಹೊರಟಿದೆ.

KA,23 F0988 ವಾಹನ ಸಂಖ್ಯೆ ಹೊಂದಿರುವ ಸರ್ಕಾರಿ ಬಸ್ ಇದಾಗಿದ್ದು, ಹಿಂದೆ ಬಂದ ವಾಹನ ಸವಾರರಿಗೆ ರಸ್ತೆ ಕಾಣದಂತೆ ಹೋಗೆ ತುಂಬಿಕೊಂಡರು ಬಸ್ ಚಾಲಕ ಮಾತ್ರ ರಾಜಾರೋಷವಾಗಿ ಬಸ್ ಚಲಾವಣೆ ಮಾಡಿ ನಿರ್ಲಕ್ಷ ತೋರಿದ್ದಾರೆ.ಬಸ್ ಸ್ಥಿತಿ ನೋಡಿದ ಜನರು ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಅಥಣಿ ಪಟ್ಟಣದ ರಾಯಲ್ ಹಾಲ್’ನಲ್ಲಿಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಭೆ

Spread the loveಅಥಣಿ ಪಟ್ಟಣದ ರಾಯಲ್ ಹಾಲ್’ನಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು,ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿಯವರ ಅಧ್ಯಕ್ಷತೆಯಲ್ಲಿ ನಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ