ಧಾರವಾಡ: ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಿರುಕುಳ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೆ, ಕಾನೂನು ಮೀರಿ ಸಾಲ ವಸೂಲಾತಿಗೆ ಇಳಿದ ಸಂಸ್ಥೆಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ನಡುವೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗಿ ಗ್ರಾಮದಲ್ಲಿ 7 ತಿಂಗಳ ಗರ್ಭಿಣಿ ಡೀನಾ ಫೀಲಿಪ್ ಅವ ರನ್ನು ಮನೆಯಿಂದ ಹೊರಹಾಕಿರುವ ಆರೋಪ ಆರೋಪ ಕೇಳಿಬಂದಿದೆ.
”ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲ ಪಡೆದುಕೊಂಡಿದ್ದೆವು. ಪ್ರತಿ ತಿಂಗಳಿಗೊಮ್ಮೆ ಹಣ ಕಟ್ಟುತ್ತಲೇ ಬಂದಿದ್ದೆವು. ಆದರೆ ಉಳಿದ ಹಣ ಕಟ್ಟದ ಹಿನ್ನೆಲೆ ಫೈನಾನ್ಸ್ ಕಂಪನಿ ಮನೆ ಸೀಜ್ ಮಾಡಿದೆ. ಸದ್ಯ ನಾವು ಮನೆಯ ಹೊರಗಡೆಯೇ ವಾಸ ಮಾಡುತ್ತಿದ್ದೇವೆ. ಹಲವು ಬಾರಿ ಫೈನಾನ್ಸ್ ಸಿಬ್ಬಂದಿಗೆ ಮನವಿ ಮಾಡಿಕೊಂಡರೂ ಕೂಡ ಕಿರುಕುಳ ತಪ್ಪಿಲ್ಲ” ಎಂದು ಗರ್ಭಿಣಿ ಆರೋಪಿಸಿದ್ದಾರೆ.
”ಈಗಾಗಲೇ ಅರ್ಧ ಕಂತು ಕಟ್ಟಲಾಗಿದೆ. ಆದರೆ, ಇನ್ನುಳಿದ ಹಣ ಕಟ್ಟಲು ಕಾಲಾವಕಾಶ ಕೇಳಿದರೂ ಫೈನಾನನ್ಸ್ ಕಂಪನಿಯವರು ಸಮಯ ಕೊಡುತ್ತಿಲ್ಲ” ಎಂದು ಡೀನಾ ಫೀಲಿಪ್ ದೂರಿದ್ದಾರೆ.
Laxmi News 24×7