ಸಿದ್ದೇಶ್ವರ ಶ್ರೀಗಳ ದರ್ಶನ, ನಮ್ಮನಿಮ್ಮೆಲ್ಲರನ್ನೂ ಪಾವನವಾಗಿಸಿದೆ: ಮಹೇಶನಾಂದ ಶ್ರೀಗಳು.
ಜಗತ್ತಿನಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ದೇವರಗಿಂತ ಗುರು ದೊಡ್ಡವನಾಗಿದ್ದಾನೆ. ಅಂತಹ ಗುರುಶ್ರೇಷ್ಠರು,
ದಾರ್ಶನಿಕರು, ಯುಗಪುರುಷರು, ಮಹಾನ ತ್ಯಾಗಿಗಳು ಹಾಗೂ ನಡೆದಾಡುವ ದೇವರೆಂದು ಖ್ಯಾತಿ ಪಡೆದ ಜ್ಞಾನಯೋಗಾಶ್ರಮದ ಪ.ಪೂ. ಶ್ರೀ ಸಿದ್ದೇಶ್ವರ ಶ್ರೀಗಳು ನಮ್ಮ ನಿಮ್ಮ ಜೊತೆ ಇದ್ದದ್ದೇ ನಮ್ಮೆಲ್ಲರ ಪುಣ್ಯವೆಂದು
ಹಂಚಿನಾಳ ಭಕ್ತಿಯೋಗಾಶ್ರಮದ ಪ.ಪೂ. ಶ್ರೀ ಮಹೇಶಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.
Laxmi News 24×7