Breaking News

ತಿರುಪತಿ ಭಕ್ತರಿಗೆ ಭರ್ಜರಿ ಗುಡ್‌ನ್ಯೂಸ್! ಇನ್ಮೇಲೆ ಕೇವಲ ಮೂರೇ ಗಂಟೆಯಲ್ಲಿ ಸಿಗುತ್ತೆ ದರ್ಶನ! ಹೇಗೆ?

Spread the love

ತಿರುಪತಿ: ತಿರುಮಲದಲ್ಲಿ ತಿರುಪತಿ ತಿರುಮಲ ವೆಂಕಟೇಶ್ವರ (Tirupati ) ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಇನ್ಮುಂದೆ 2ರಿಂದ 3 ಗಂಟೆಯೊಳಗೆ ತಿಮ್ಮಪ್ಪನ ದರ್ಶನ (Tirupati Darshanam) ಭಾಗ್ಯ ಸಿಗುವಂತೆ ಕ್ರಮ ಕೈಗೊಳ್ಳಲು ಟಿಟಿಡಿ (TTD) ನಿರ್ಧರಿಸಿದೆ.ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ವಹಿಸಿರುವ ಹೊಸದಾಗಿ ರಚನೆಯಾಗಿವ ತಿರುಮಲ ತಿರುಪತಿ ದೇವಸ್ಥಾನಮ್ ಮಂಡಳಿಯು ಈಗಾಗಲೇ ದೇಗುಲದಲ್ಲಿ ಅನೇಕ ಬದಲಾವಣೆಗಳನ್ನು ತರಲು ಮುಂದಾಗಿದ್ದು, ವಿಶೇಷವಾಗಿ ಹಿಂದೂಯೇತರರಿಗೆ ಇಲ್ಲಿ ಅವಕಾಶ ಇಲ್ಲ, ಹೀಗಾಗಿ ಈ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರವಧಿಯಲ್ಲಿ ತಿರುಪತಿ ದೇಗುಲದಲ್ಲಿ ನೌಕರರಾಗಿ ಸೇರಿದ್ದ ಹಿಂದೂಯೇತರ ಅಧಿಕಾರಿಗಳಿಗೆ ಕೂಡಲೇ ಜಾಗ ಖಾಲಿ ಮಾಡುವಂತೆ ಟಿಟಿಡಿ ಸೂಚಿಸಿದೆ.

ಈತನ್ಮಧ್ಯೆ ತಿರಪತಿ ವೆಂಕಟೇಶ್ವರ ದೇವರ ದರ್ಶನಕ್ಕೆ ಬರುವ ಭಕ್ತರಿಗೆ 2ರಿಂದ 3 ಗಂಟೆಯೊಳಗೆ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುವಂತೆ ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿದೆ. ಅದು ಹೇಗೆ ಸಾಧ್ಯ ಎಂದು ನೋಡಿದರೆ ಬಳೆ ವ್ಯವಸ್ಥೆ ಮತ್ತೆ ಜಾರಿಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಾಮಾನ್ಯವಾಗಿ ವೆಂಕಟೇಶ್ವರನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರಿಗೆ 300 ರೂಪಾಯಿಗೆ ವಿಶೇಷ ಪ್ರವೇಶ ದರ್ಶನ, ರೂ.10,500 ವಿಶೇಷ ದರ್ಶನ, ಆರ್ಜಿತ ಸೇವೆಗಳು, ಸ್ಲಾಟ್ ದರ್ಶನ, ಸೇರಿದಂತೆ ಎಲ್ಲಾ ದರ್ಶನಗಳಂತಹ ನೀತಿಗಳು ಜಾರಿಯಲ್ಲಿವೆ. ಆದರೆ ತಿರುಮಲಕ್ಕೆ ಬರುವ ಬಹುತೇಕ ಭಕ್ತರು ಸಾಮಾನ್ಯ ಭಕ್ತರು. ಅವರಿಗೆ ದೊಡ್ಡ ಮೊತ್ತ ನೀಡಲಾಗುವುದು ಕಷ್ಟ ಎಂದು ಟಿಟಿಡಿಯ ನೂತನ ಆಡಳಿತ ಮಂಡಳಿ ಹೇಳಿದೆ. ಹೀಗಾಗಿ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯಲು ಪೀಕ್ ಸಮಯದಲ್ಲಿ ಸರತಿ ಸಾಲಿನಲ್ಲಿ ಸುಮಾರು 30 ಗಂಟೆಗಳ ಕಾಲ ಕಾಯಬೇಕಾಗಿದೆ.

ಈಗ ಸ್ಲಾಟ್ ದರ್ಶನ ಎಂದರೆ ಶ್ರೀನಿವಾಸ ಮತ್ತು ವಿಷ್ಣುವಾಸದಲ್ಲಿ ಆಧಾರ್ ಕಾರ್ಡ್ ಮೂಲಕ ಭಕ್ತರಿಗೆ ದರ್ಶನದ ಸಮಯವನ್ನು ನಿಗದಿಪಡಿಸಲಾಗಿದೆ. ಇದರಿಂದ 2 ಅಥವಾ 3 ಗಂಟೆಯೊಳಗೆ ದರ್ಶನ ಪೂರ್ಣಗೊಳ್ಳಲಿದೆ. ಆದರೆ ಈ ಟಿಕೆಟ್‌ಗಳು ಸೀಮಿತವಾಗಿವೆ. ಈ ಹಿಂದೆ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟಿಲುಗಳಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ದಿವ್ಯ ದರ್ಶನದ ಹೆಸರಿನಲ್ಲಿ ಕೆಲ ಟಿಕೆಟ್‌ಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ಹಿಂದಿನ ಸರಕಾರ ಈ ನೀತಿಯನ್ನು ರದ್ದುಗೊಳಿಸಿತ್ತು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ