Breaking News

‘ಮಣ್ಣಲ್ಲಿ ಹುದುಗಿದ ಇತಿಹಾಸ ಬೆಳಗಲಿ’

Spread the love

ರಾಣಿ ಚನ್ನಮ್ಮ ವೇದಿಕೆ, ಚನ್ನಮ್ಮನ ಕಿತ್ತೂರು: ‘ಕಿತ್ತೂರು ಸಂಸ್ಥಾನದ ಇತಿಹಾಸದ ಈ ಭಾಗದ ಊರು ಹಾಗೂ ಮನೆಗಳಲ್ಲಿ ಹುದುಗಿಹೋಗಿದೆ. ಅದನ್ನು ಹೊರಗೆ ತೆಗೆಯುವ ಕೆಲಸವಾಗಬೇಕು. ಅದು ನಾಡಿನೆಲ್ಲೆಡೆ ಬೆಳಗುವಂತಾಗಬೇಕು’ ಎಂದು ಸಾಹಿತಿ ಶೇಖರ ಹಲಸಗಿ ಬಯಸಿದರು.

ಕಿತ್ತೂರು ಉತ್ಸವದ ಕೊನೆಯ ದಿನವಾದ ಶುಕ್ರವಾರ ನಡೆದ ಎರಡನೇ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.

 

‘ಕಿತ್ತೂರು ಸಂಸ್ಥಾನದ ಹಿರೇಮಲ್ಲಶೆಟ್ಟಿ ಹಾಗೂ ಚಿಕ್ಕಮಲ್ಲಶೆಟ್ಟಿ ವ್ಯಾಪಾರಕ್ಕಾಗಿ ಬಂದು ದೊರೆಗಳಾದವರು. ಅವರಲ್ಲಿ ಐದನೆಯ ದೊರೆಯಾಗಿದ್ದ ಅಲ್ಲಪ್ಪಗೌಡ ದೇಸಾಯಿ ಈ ಸಂಸ್ಥಾನದಲ್ಲಿ ಹೊಸಭಾಷ್ಯ ಬರೆದರು’ ಎಂದರು.

‘ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಗೆದ್ದ 200ನೇ ವಿಜಯೋತ್ಸವ ಇದಾಗಿದೆ. ಮುಂದೇನು ಮಾಡಬೇಕು ಎಂಬ ಸವಾಲು ನಮ್ಮ ಮುಂದಿದೆ. ವಿಚಾರ ಸಂಕಿರಣದಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಕ್ಕೆ ಬರಬೇಕು. ಸಂಶೋಧನಾತ್ಮಕ ವಿಷಯಗಳು ಹೊಸ ಬೆಳಕು ಚೆಲ್ಲಬೇಕು’ ಎಂದು ಅವರು ಬಯಸಿದರು.

‘ಮಲ್ಲಸರ್ಜ ಮತ್ತು ಸಮಕಾಲೀನ ರಾಜಕೀಯ ವ್ಯವಸ್ಥೆ’ ಕುರಿತು ಮಹೇಶ ಚನ್ನಂಗಿ ಮಾತನಾಡಿ, ‘ಕಿತ್ತೂರು ಸಂಸ್ಥಾನದ ಕೊನೆಯ ದೊರೆ ಶಿವಲಿಂಗರುದ್ರ ಸರ್ಜ ಅಕಾಲಿಕವಾಗಿ ನಿಧನರಾದ ನಂತರ ಪತ್ನಿ ವೀರಮ್ಮ ದತ್ತಕ ಪುತ್ರನನ್ನು ತೆಗೆದುಕೊಳ್ಳುತ್ತಾಳೆ. ಪತಿ ಸತ್ತಾಗ ವೀರಮ್ಮನ ವಯಸ್ಸು ಕೇವಲ 11 ಆಗಿತ್ತು. ಅಲ್ಪವಯಸ್ಸಿನಲ್ಲಿ ದತ್ತಕ ಮಾಡಿಕೊಳ್ಳುವುದನ್ನು ಮಾತ್ರ ಬ್ರಿಟಿಷರು ವಿರೋಧಿಸಿದ್ದರು’ ಎಂದು ತಿಳಿಸಿದರು.

‘ಆಂಗ್ಲರ ಒಂದನೇ ಮತ್ತು ಎರಡನೇ ಯುದ್ಧದ ಚಿತ್ರಣ’ ವಿಷಯ ಕುರಿತು ಶಿಕ್ಷಕ ಮಂಜುನಾಥ ಕಳಸಣ್ಣವರ ಮಾತನಾಡಿ, ‘ರಾಣಿ ಚನ್ನಮ್ಮನ ನಂತರ ಹೋರಾಟ ಮುಂದುವರೆಸಿದ್ದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಬಂಧಿಸುತ್ತಾರೆ. ರಾಯಣ್ಣನ ಸೇರಿ 13 ಜನರನ್ನು ಗಲ್ಲಿಗೇರಿಸುತ್ತಾರೆ. ಉಳಿದ 12 ಜನರು ಹಿನ್ನೆಲೆ ಏನಾಗಿತ್ತು. ಅವರೆಲ್ಲರ ಊರುಗಳು ಯಾವವು ಎಂಬುದರ ಬಗ್ಗೆ ಸಂಶೋಧನೆ ಆಗಬೇಕು’ ಎಂದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ