Breaking News

ವಧು-ವರರ ಸಮಾವೇಶ 28ರಂದು

Spread the love

ಹುಬ್ಬಳ್ಳಿ: ‘ಆನಂದ ಅಸೋಸಿಯೇಟ್ಸ್‌ ವತಿಯಿಂದ ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಎದುರಿನ ಸರಸ್ವತಿ ನಿಕೇತನದಲ್ಲಿ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಸುರೇಶ ಕುಪ್ಪಸಗೌಡರ ಹೇಳಿದರು.

 

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಜಾತಿ ಹಾಗೂ ಒಳಪಂಗಡ ವರ್ಗದವರು ವಧು-ವರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಂತರ್ಜಾತಿ ವಿವಾಹ, ಮರುವಿವಾಹ ಬಯಸುವವರು, ವಿಚ್ಛೇದಿತರು, ವಿಧುರ-ವಿಧವೆಯರು ಸಹ ಪಾಲ್ಗೊಳ್ಳಬಹುದು. ₹500 ಪ್ರವೇಶ ಶುಲ್ಕವಿದೆ’ ಎಂದು ತಿಳಿಸಿದರು.

‘ಆಸಕ್ತರು, ಆನಂದ ಅಸೋಸಿಯೇಟ್ಸ್‌, ಕರ್ನಾಟಕ ಬ್ಯಾಂಕ್ ಹತ್ತಿರ, ಮರಾಠಾ ಕಾಲೊನಿ, ಧಾರವಾಡ, ಇಲ್ಲಿಗೆ ಭೇಟಿ ನೀಡಬಹುದು. ಮಾಹಿತಿಗೆ ಮೊ: 9343402308, 9611142568 ಸಂಪರ್ಕಿಸಬಹುದು’ ಎಂದು ಮಾಹಿತಿ ನೀಡಿದರು.

ಭಾವಸಾರ ಸಮಾಜದಿಂದ ಸಮಾವೇಶ


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ