ಚಿಕ್ಕೋಡಿ ಜಿಲ್ಲೆ ರಚನೆ: ಎಲ್ಲರೂ ಪರ, ಸರ್ಕಾರ ನಿರ್ಧಾರ ತಗೊಳ್ಳಲಿದೆ: ಸಚಿವ ಸತೀಶ್ ಜಾರಕಿಹೊಳಿ
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಸ್ ನಿಲ್ದಾಣದ ಬಳಿ ಸರ್ಕಾರಿ ನೌಕರರ ಭವನ ಶಂಕುಸ್ಥಾಪನೆ ನೆರವೇರಿಸಿದರು.
*ಚಿಕ್ಕೋಡಿ ಜಿಲ್ಲೆ ರಚನೆ:*
“ಎಲ್ಲರೂ ಚಿಕ್ಕೋಡಿ ಜಿಲ್ಲೆಯ ರಚನೆಯ ಪರವಾಗಿದ್ದೇವೆ. ಯಾರೂ ಸಹ ವಿರೋಧಿಸುತ್ತಿಲ್ಲ. ಸರ್ಕಾರ ನಿರ್ಧಾರ ತಗೊಳ್ಳಲಿದೆ,” ಎಂದು ಮಾಧ್ಯಮಗಳಿಗೆ ಹೇಳಿದರು.
*ಮಾಜಿ ಸಚಿವ ನಾಗೇಂದ್ರರ ಬಂಧನ:*
“ಮುಂದಿನ ಕಾನೂನು ಪ್ರಕ್ರಿಯೆ ಸರ್ಕಾರಕ್ಕೆ ಬಿಟ್ಟದ್ದು,” ಎಂದು ಪ್ರತಿಕ್ರಿಯಿಸಿದರು.
*ಅಪೆಕ್ಸ್ ಹಗರಣ:*
“ಜಾರಿ ನಿರ್ದೇಶನಾಲಯ ಹಾಗೂ ನ್ಯಾಯಲಯ ಮುಂದಿನ ಕ್ರಮ ತೆಗೆದುಕೊಳ್ಳುತ್ತವೆ. ನಾನು ಪ್ರತಿಕ್ರಿಯಿಸುವುದು ಸಮಂಜಸವಲ್ಲ,” ಎಂದು ವಿವರಿಸಿದರು.