Breaking News

ಪಹಣಿಗೆ ಆಧಾರ್ ಜೋಡಣೆ|ಕೆ.ಹೊಸಳ್ಳಿ ರಾಜ್ಯಕ್ಕೆ ಪ್ರಥಮ: ಉಪತಹಶೀಲ್ದಾರ್

Spread the love

ಸಿಂಧನೂರು: ತಾಲ್ಲೂಕಿನ ಕೆ.ಹೊಸಳ್ಳಿ ಗ್ರಾಮದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ 98ರಷ್ಟು ಮುಗಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಜಾಲಿಹಾಳ ಹೋಬಳಿಯ ಉಪತಹಶೀಲ್ದಾರ್ ಶ್ರೀನಿವಾಸ ಹೇಳಿದರು.

ಪಹಣಿಗೆ ಆಧಾರ್‌ ಜೋಡಣೆ ಯಶಸ್ಸಿಗಾಗಿ ತಾಲ್ಲೂಕಿನ ಜಾಲಿಹಾಳ ಹೋಬಳಿ ಕೇಂದ್ರದಲ್ಲಿ ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಹಣಿಗೆ ಆಧಾರ್ ಜೋಡಣೆ|ಕೆ.ಹೊಸಳ್ಳಿ ರಾಜ್ಯಕ್ಕೆ ಪ್ರಥಮ: ಉಪತಹಶೀಲ್ದಾರ್

‘ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಪಹಣಿಯಲ್ಲಿ ರೈತರ ಭಾವಚಿತ್ರ ಬರುತ್ತದೆ. ಯಾವುದೇ ರೀತಿಯ ಸಮಸ್ಯೆಗಳ ಉದ್ಭವಿಸಿದರೂ, ಅವುಗಳ ಇತ್ಯರ್ಥಕ್ಕೆ ನೆರವಾಗುತ್ತದೆ’ ಎಂದರು.

ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿದರು. ಜಾಲಿಹಾಳ ಹೋಬಳಿಯ ಕಂದಾಯ ನಿರೀಕ್ಷಕ ನಂದಾ, ಗ್ರಾಮದ ಆಡಳಿತ ಅಧಿಕಾರಿಗಳಾದ ವಿಜಯ, ಸುನೀತಾ, ರಾಧಾ, ನವಾಜ್ ಮೃತ್ಯುಜಯ ಇದ್ದರು.


Spread the love

About Laxminews 24x7

Check Also

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

Spread the love ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ