ವಿಜಯಪುರ: 16 ವರ್ಷದ ಯುವಕನೊಬ್ಬನನ್ನು ಪುಸಲಾಯಿಸಿ ಕರೆದುಕೊಂಡು, 28 ವರ್ಷದ ಗೃಹಿಣಿಯೊಬ್ಬಳು ಪರಾರಿಯಾಗಿರುವ (Woman Eloped with boy) ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ವಿವಾಹಿತೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಒಂದು ಮಗುವನ್ನು ಎತ್ತಿಕೊಂಡು (Viral News) ಇನ್ನೊಂದನ್ನು ಬಿಟ್ಟು ಆಕೆ ಪರಾರಿಯಾಗಿದ್ದಾಳೆ!
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಲ್ಲಿಕಾರ್ಜುನ್ ಹಿರೇಮಠ (16) ಹಾಗೂ ಮಲ್ಲಮ್ಮ (28) ಓಡಿಹೋದವರು. ಇವರಿಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪ್ರೇಮಾಂಕುರವಾಗಿದೆ. ಕಳೆದ ಒಂದು ತಿಂಗಳಿನಿಂದ ಮಲ್ಲಿಕಾರ್ಜುನ್ ಹಾಗೂ ಮಲ್ಲಮ್ಮ ಕಾಣೆಯಾಗಿದ್ದಾರೆ.
ಕಾಣೆಯಾಗಿರುವ ಮಲ್ಲಿಕಾರ್ಜುನನ ತಾಯಿ ಅಕ್ಕಮಹಾದೇವಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. ಈ ಹಿಂದೆ ಮಲ್ಲಿಕಾರ್ಜುನನಿಗೆ ಬೆಳ್ಳಿಯ ಸರವನ್ನು ಕೂಡ ಮಲ್ಲಮ್ಮ ಕೊಡಿಸಿದ್ದಳಂತೆ. ಮಲ್ಲಿಕಾರ್ಜುನನ ಬಳಿ ಆತನ ತಾಯಿ ಅಕ್ಕಮಹಾದೇವಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಆತ ವಿಷ ಕುಡಿದಿದ್ದ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಎಂದು ಅಕ್ಕಮಹಾದೇವಿ ತಿಳಿಸಿದ್ದಾರೆ.ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೇ 13ರಂದು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮಲ್ಲಿಕಾರ್ಜುನ್ ಕಿಡ್ನಾಪ್ ಆಗಿದ್ದಾನೆ ಎಂದು ದಾಖಲಾಗಿದೆ. ಮಲ್ಲಿಕಾರ್ಜುನನೊಂದಿಗೆ ಕಾಣೆಯಾಗಿರುವ ಮಲ್ಲಮ್ಮಗೆ ಎರಡು ಮಕ್ಕಳಿವೆ. ಇದರಲ್ಲಿ ನಾಲ್ಕು ವರ್ಷದ ಮಗುವನ್ನು ತೆಗೆದುಕೊಂಡು ಮಲ್ಲಮ್ಮ ಕಾಣೆಯಾಗಿದ್ದಾಳೆ. ಈ ವಿಚಾರವಾಗಿ ಮಲ್ಲಮ್ಮನ ಪತಿಯಾಗಲಿ ಆಕೆಯ ಕುಟುಂಬಸ್ಥರಾಗಲಿ ಯಾವುದೇ ದೂರು ನೀಡಿಲ್ಲ.