Breaking News

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್‌ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭ

Spread the love

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್‌ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭವಾಗಲಿದೆ.

ಸುಕ್ಷೇತ್ರ ಆಳಂದಿಯವರೆಗೆ ವಾಹನಗಳ ಮೂಲಕ ಹೊರಟು ಜೂನ್‌ 30ಕ್ಕೆ ಆಳಂದಿಯಿಂದ ಪಾದಯಾತ್ರೆ ಮೂಲಕ ಪಂಢರಪುರವನ್ನು ಜುಲೈ 17 ರಂದು ತಲುಪಲಿದೆ. ಜುಲೈ 17 ರಂದು ಆಷಾಡ ಏಕಾದಶಿ ಮುಗಿಸಿ ಜುಲೈ 18 ರಂದು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ವಾಹನ ಮೂಲಕ ಬೆಲಾಗುವುದು.

ಮುನವಳ್ಳಿ: ಪಂಢರಪುರಕ್ಕೆ ಆಷಾಡಿವಾರಿ ಪಾದಯಾತ್ರೆ

ಸಂಪ್ರದಾಯದಂತೆ ಪ್ರತಿವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಡಿವಾರಿ ಪಾಲಕಿ ಮಹೋತ್ಸವ ಜರುಗಲಿದೆ. ತಾಳ, ಮೇಳ, ತಮ್ಮ ಸಲಕರಣೆ ಜೊತೆಗೆ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಪ್ರತಿಗ್ರಾಮಗಳಲ್ಲಿ ಅಲ್ಪೋಪಹಾರ, ಊಟ, ರಾತ್ರಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ ಮತ್ತು ಪ್ರಯಾಣದ ಉದ್ದಕ್ಕೂ ಕೀರ್ತನೆ, ಹರಿನಾಮ ಸಂಕೀರ್ತನೆ ಹಾಗೂ ನೀತಿ ಬೋಧಕ ಕಥೆ ವಿವರಣೆ ಜರುಗುವುದು. ಒಟ್ಟು 23 ದಿನದ ಪಾದಯಾತ್ರೆ ಇರುತ್ತದೆ. ಪಾದಯಾತ್ರೆ ಮಾಡಲು ಇಚ್ಛಿಸುವರು ಜೂನ್ 25 ರೊಳಗಾಗಿ ಅಂಗದ ಅರವಿಂದ ರೇಣಕೆ (7204780158) ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

88ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ

Spread the love88ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ