Breaking News

ಚಿತ್ರರಂಗದ ಪರವಾಗಿ ಕ್ಷಮೆ ಕೇಳ್ತೀವಿ; ರೇಣುಕಾಸ್ವಾಮಿ ಕುಟುಂಬಕ್ಕೆ ಫಿಲ್ಮ್ ಚೇಂಬರ್​ನಿಂದ ₹5 ಲಕ್ಷ ಪರಿಹಾರ

Spread the love

ಚಿತ್ರರಂಗದ ಪರವಾಗಿ ಕ್ಷಮೆ ಕೇಳ್ತೀವಿ; ರೇಣುಕಾಸ್ವಾಮಿ ಕುಟುಂಬಕ್ಕೆ ಫಿಲ್ಮ್ ಚೇಂಬರ್​ನಿಂದ ₹5 ಲಕ್ಷ ಪರಿಹಾರ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ (Actor Darshan) ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಫಿಲ್ಮ್​ ಚೇಂಬರ್​ ಮೃತನ ಮನೆಗೆ ಇಂದು ಭೇಟಿ ನೀಡಿತು. ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅವರ ತಂದೆ-ತಾಯಿ, ಗರ್ಭಿಣಿ ಪತ್ನಿಗೆ ಫಿಲ್ಮ್​ ಚೇಂಬರ್​ ಅಧ್ಯಕ್ಷರು ಸೇರಿದಂತೆ ಪ್ರಮುಖರು ಸಾಂತ್ವಾನ ಹೇಳಿದರು.

ಮೊದಲಿಗೆ ಕುಟುಂಬದ ಬಳಿ ಚಿತ್ರರಂಗದ ಪರವಾಗಿ ಕ್ಷಮೆ ಕೇಳುವುದಾಗಿ ಫಿಲ್ಮ್​ ಚೇಂಬರ್​ ಅಧ್ಯಕ್ಷ ಎನ್​.ಎಂ.ಸುರೇಶ್​ ಹೇಳಿದರು. ನಂತರ 5 ಲಕ್ಷ ರೂ. ಚೆಕ್​ ಅನ್ನು ಪರಿಹಾರವಾಗಿ ನೀಡಿ, ಮುಂದೆ ಮತ್ತಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಚಿತ್ರರಂಗದ ಪರವಾಗಿ ಕ್ಷಮೆ ಕೇಳ್ತೀವಿ; ರೇಣುಕಾಸ್ವಾಮಿ ಕುಟುಂಬಕ್ಕೆ ಫಿಲ್ಮ್ ಚೇಂಬರ್​ನಿಂದ ₹5 ಲಕ್ಷ ಪರಿಹಾರ

ಯಾವುದೇ ರಾಜಿಗಾಗಿ ಇಲ್ಲಿಗೆ ಬಂದಿಲ್ಲ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಫಿಲ್ಮ್ ಚೆಂಬರ್ ಅಧ್ಯಕ್ಷ ಎನ್​.ಎಂ. ಸುರೇಶ್, ಚಿತ್ರರಂಗದ ಪರವಾಗಿ ಕ್ಷಮೆ ಕೇಳಲು ಬಂದಿದ್ದೇವೆ.

ಯಾರೇ ಮಾಡಿದ್ದರೂ ತಪ್ಪು ತಪ್ಪೇ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ತಪ್ಪನ್ನು ಖಂಡಿಸುತ್ತದೆ. ರೇಣುಕಾಸ್ವಾಮಿ ಅವರ ತಂದೆ-ತಾಯಿ ಕಣ್ಣೀರು ನೋಡಿದ್ರೆ ನಮಗೂ ಕಣ್ಣೀರು ಬಂತು.

ನಾವು ಇಲ್ಲಿಗೆ ಸಂತಾಪ ಹೇಳಲು ಬಂದಿದ್ದೇವೆ ಹೊರತು, ಯಾವುದೇ ರಾಜಿಗಾಗಿ ಅಲ್ಲ. ಇಂದು ಐದು ಲಕ್ಷ ರೂ. ಚೆಕ್​ ಅನ್ನು ಸಾಂಕೇತಿಕವಾಗಿ ಕೊಡಲಾಗಿದೆ.

ಮುಂದೆಯೂ ಇನ್ನೂ ಸಹಾಯ ಮಾಡಬೇಕು, ಮಾಡುತ್ತೇವೆ. ಶಾಶ್ವತ ಪರಿಹಾರ ನೀಡಲು ನಿರ್ಧಾರ ಮಾಡಲಾಗಿದೆ ಎಂದರು. ಚಿತ್ರರಂಗದ ಬಗ್ಗೆ, ವಾಣಿಜ್ಯ ಮಂಡಳಿ ಬಗ್ಗೆ ದೂಷಣೆ ಮಾಡಬೇಡಿ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ