Breaking News

BJPಯಲ್ಲಿ ಮುನಿಸು, ಅಸಮಾಧಾನ ಇದೆ : ಸಚಿವ ಜೋಶಿ

Spread the love

ಧಾರವಾಡ : ಬಿಜೆಪಿ ಪಕ್ಷದಲ್ಲಿ ಭಿನ್ನಮತವಿಲ್ಲದ ಕಾರಣ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗುರುವಾರ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕುರಿತಂತೆ ಒಂದಿಷ್ಟು ಮುನಿಸು, ಅಸಮಾಧಾನ ಇರಬಹುದು ಹೊರತು ಭಿನ್ನಮತವಿಲ್ಲ.

ಹೀಗಾಗಿ ಸಂಗಣ್ಣ ಕರಡಿ ಸೇರಿದಂತೆ ಯಾರೂ ಬಿಜೆಪಿ ಪಕ್ಷವನ್ನು ತೊರೆದು ಹೋಗಲಾರರು ಎಂದರು.

BJPಯಲ್ಲಿ ಮುನಿಸು, ಅಸಮಾಧಾನ ಇದೆ ಹೊರತು ಭಿನ್ನಮತವಿಲ್ಲ: ಸಚಿವ ಜೋಶಿ

ಮಾಧುಸ್ವಾಮಿ ಜತೆಗೆ ಬಿ.ಎಸ್.ಯಡಿಯೂರಪ್ಪನವರು ಮಾತನಾಡುತ್ತಿದ್ದು, ಈಶ್ವರಪ್ಪ ಜತೆಗೂ ರಾಷ್ಟ್ರೀಯ ನಾಯಕರೇ ಮಾತನಾಡಿದ್ದಾರೆ. ಉಳಿದಂತೆ ಎಲ್ಲವೂ ಸುಖಾಂತ್ಯ ಕಾಣಲಿದೆ. ಯಾರೂ ಪಕ್ಷ ಬಿಡಲ್ಲ ಎಂಬ ನಂಬಿಕೆಯಿದ್ದು, ಎಲ್ಲವೂ ಸರಿ ಆಗುತ್ತದೆ. ಇನ್ನು ಇನ್ನು ಬೆಳಗಾವಿಯ ಲೋಕಸಭಾ ಮತಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಅವರ ಹೆಸರೇ ಮುಂಚೂಣಿಯಲ್ಲಿದೆ. ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಶೀಘ್ರವೇ ಪರಿಹಾರ ಕಾಣಲಿದೆ ಎಂದರು.


Spread the love

About Laxminews 24x7

Check Also

ಬಿಜೆಪಿಯವರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?: ಸಿಎಂ

Spread the loveಮಂಗಳೂರು: “ಬಿಜೆಪಿಯವರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?. ನಾವು (ಕಾಂಗ್ರೆಸ್​) ಪಾದಯಾತ್ರೆ ಮಾಡಿರುವುದು ನಿರ್ದಿಷ್ಟ ಕಾರಣಕ್ಕೋಸ್ಕರ” …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ