Breaking News

ಸಚಿವ ಪ್ರಲ್ಹಾದ್​​ ಜೋಶಿ ಹೊಸ ಬಾಂಬ್

Spread the love

ಹುಬ್ಬಳ್ಳಿ, ಜನವರಿ 05: ರಾಮಜನ್ಮಭೂಮಿ ಹೋರಾಟದ ಕೇಸ್​ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಲು ಯಾವ ದಾಖಲೆ ಇರಲಿಲ್ಲ. ಹೀಗಾಗಿ ಕೋರ್ಟ್ ಬಿಡುಗಡೆ ಮಾಡಿದೆ. ನಾವು ಪ್ರತಿಭಟನೆ ಮಾಡದೇ ಹೋಗಿದ್ದರೆ ಇನ್ನು ಅನೇಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ(Pralhad Joshi)ಹೊಸ ಬಾಂಬ್ ಸಿಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ವಿರುದ್ದ ಅಸಭ್ಯವಾಗಿ ಮಾತಾಡಿರುವುದಕ್ಕೆ ನೀವು ರಾಜ್ಯಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.

ಈ ಕೇಸ್​​ನ ಎಫ್​ಐಆರ್​​ ಕಾಪಿ ಕೂಡ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಕಾಲದಲ್ಲಿ ರಾಮ ಮಂದಿರ ಆಗುತ್ತಿದೆ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಅರೆಸ್ಟ್ ಮಾಡಿದ್ದಾರೆ. ಹಿಂದೂ ದ್ವೇಷದಿಂದ ಅರೆಸ್ಟ್ ಮಾಡಿದ್ದೀರಿ ತಾನೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕಾನೂನು ರೀತಿ ನಡೆದುಕೊಂಡಿದ್ದೇವೆ ಎಂದಿತ್ತು. ನಾವು ಹಿಂದೂ ವಿರೋಧಿ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ, ನಿಮಗೆ ಮಾಹಿತಿ ಕೊಟ್ಟ ಅಧಿಕಾರಿಗಳು‌ ನಿಮ್ಮನ್ನು ದಾರಿ ತಪ್ಪಿಸಿದ್ದಾರೆ‌. ಏಕೆಂದರೆ A1 ಖುಲಾಸೆಯಾಗಿದ್ದಾನೆ. ನನಗೆ ನೆನಪಿರುವ ಹಾಗೆ A7 ಖುಲಾಸೆ ಆಗಿದ್ದಾನೆ. ಎಲ್ಲರೂ ಖುಲಾಸೆ ಆಗಿದ್ದಾರೆ ಎಂದಿದ್ದಾರೆ.

ಸರ್ಕಾರವೇ ಇದನ್ನು ನಿಂತು ಮಾಡಿಸಿದೆ

ಕೇಸ್​​ನಲ್ಲಿದ್ದ ಅನೇಕ ಹಿಂದೂ ಯುವಕರನ್ನು ಕರೆಸುತ್ತಿದ್ದರು. ಮುಂದೆ ಹೀಗಾದರೆ ನೀವು ದೊಡ್ಡ ಹೋರಾಟ ಎದುರಿಸಬೇಕಾಗತ್ತೆ ಎಂದು ಹೇಳಿದ್ದೆ. ಸರ್ಕಾರವೇ ಇದನ್ನು ನಿಂತು ಮಾಡಿಸಿದೆ. ಅವನ ಮೇಲೆ ಕೇಸ್​ಯಿದೆ ಎಂದು ಹೇಳಿದ್ದರು. ನಿಮ್ಮ ಇಂಟಲಿಜೆನ್ಸ್ ಕತ್ತೆ ಕಾಯುತ್ತಿದೆ. ಸಿದ್ದರಾಮಯ್ಯ ನಿಮಗೆ ಬುದ್ಧಿ ಬೇಡ್ವಾ ಅದನ್ನ ಪರಿಶೀಲನೆ ಮಾಡಬೇಕು. ಅವರಿಗೆ ದಾಖಲೆ ಕೊಟ್ಟವರ ವಿರುದ್ದ ಕ್ರಮ ಆಗಬೇಕು. ನಿಮಗೆ ರಾಜ್ಯ ಆಡಳಿತ ಮಾಡುವ ಯೋಗ್ಯತೆ ಇದೆಯಾ. ಕಾಂಗ್ರೆಸ್ ಮಾಡುವುದು ವೋಟ್ ಪಾಲಟಿಕ್ಸ್. ಕಾಂಗ್ರೆಸ್​ಗೆ ಹಿಂದೂ ವಿರೋಧಿ ಪೃವತ್ತಿ ಮೊದಲನಿಂದಲೂ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.


Spread the love

About Laxminews 24x7

Check Also

ಧಾರವಾಡದಲ್ಲಿ‌ ಸರ್ಕಾರಿ‌ ಕಚೇರಿ‌ ಆವರಣದಲ್ಲಿಯೇ ಕಳ್ಳರ ಕೈಚಳಕ‌ತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ‌ ಕಳ್ಳರು

Spread the love ಧಾರವಾಡದಲ್ಲಿ‌ ಸರ್ಕಾರಿ‌ ಕಚೇರಿ‌ ಆವರಣದಲ್ಲಿಯೇ ಕಳ್ಳರ ಕೈಚಳಕ‌ತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ