ಜೈಪುರ(ರಾಜಸ್ಥಾನ): ಮತ್ತೆ ಅಧಿಕಾರಕ್ಕೆ ಮರಳಲು ಪ್ಲಾನ್ ಹಾಕಿರುವ ಸಿಎಂ ಅಶೋಕ್ ಗೆಹ್ಲೋಟ್ ಅದಕ್ಕಾಗಿ ಭರ್ಜರಿ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ಇಂದು ಸ್ಮಾರ್ಟ್ಫೋನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಯೋಜನೆಗೆ ಚಾಲನೆ ಸಿಗುವ ಮುನ್ನವೇ ಕಾಂಗ್ರೆಸ್ ನೇತಾರ, ರಾಹುಲ್ ಗಾಂಧಿ ನಿನ್ನೆ ಮಂಗರ್ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಸ್ಮಾರ್ಟ್ಫೋನ್ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಚಿರಂಜೀವಿ ಕುಟುಂಬದ ಮಹಿಳಾ ಮುಖ್ಯಸ್ಥರು ಸ್ಮಾರ್ಟ್ಫೋನ್ಗಳನ್ನು ಪಡೆಯಲಿದ್ದಾರೆ. ಸ್ಮಾರ್ಟ್ ಫೋನ್ ಯೋಜನೆ ಅಡಿ ರಾಜ್ಯದ 40 ಲಕ್ಷ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಇವತ್ತೇ ‘ಡಿಜಿಟಲ್ ಸಖಿ ಪುಸ್ತಕ’ವನ್ನ ಬಿಡುಗಡೆ ಆಗಲಿದೆ.
ಈ ಯೋಜನೆಯ ಮಾನದಂಡಗಳೇನು?: ಸ್ಮಾರ್ಟ್ಫೋನ್ ಮತ್ತು ಸಿಮ್ಗಾಗಿ 6,800 ರೂಗಳನ್ನು ನೇರ ಹಣ ವರ್ಗಾವಣೆ ಡಿಬಿಟಿ ಮೂಲಕ ಇ-ವ್ಯಾಲೆಟ್ನಲ್ಲಿ ಠೇವಣಿ ಇಡಲಾಗುತ್ತದೆ. ಇದಲ್ಲದೇ ಸರ್ಕಾರಿ ಶಾಲೆಗಳಲ್ಲಿ 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಗೂ ಸ್ಮಾರ್ಟ್ಫೋನ್ ಸಿಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು, ವಿಧವೆ -ಒಂಟಿ ಮಹಿಳಾ ಪಿಂಚಣಿ ಪಡೆಯುವ ವನಿತೆಯರು ಹಾಗೂ 2022-23ರಲ್ಲಿ MNREGA ಯೋಜನೆಯಲ್ಲಿ 100 ಕೆಲಸದ ದಿನಗಳನ್ನು ಪೂರೈಸಿದ ಮಹಿಳಾ ಮುಖ್ಯಸ್ಥರು, 2022-23 ರಲ್ಲಿ ಇಂದಿರಾಗಾಂಧಿ ನಗರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 50 ಕೆಲಸದ ದಿನಗಳನ್ನು ಪೂರ್ಣಗೊಳಿಸಿದ ಮಹಿಳೆಯರ ಕುಟುಂಬದ ಮಹಿಳಾ ಮುಖ್ಯಸ್ಥರು ಈ ಸ್ಮಾರ್ಟ್ ಫೋನ್ಗಳನ್ನು ಪಡೆಯಲು ಅರ್ಹರಾಗಿದ್ದಾರೆ.