Breaking News

ಇನ್ಮುಂದೆ ಕನ್ನಡ ಸೇರಿದಂತೆ ಈ ಪ್ರಾದೇಶಿಕ ಭಾಷೆಯಲ್ಲೂ ಪಡೆಯಬಹುದು ಫೋನ್​ ಪೇ ಪೇಮೆಂಟ್​ ನೋಟಿಫಿಕೇಶನ್​

Spread the love

ಬೆಂಗಳೂರು: ಡಿಜಿಟಲ್​ ಪೇಮೆಂಟ್​ ಪ್ಲಾಟ್​​ಫಾರ್ಮ್​​ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್​ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ.

ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್​ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್​ ಸ್ಪೀಕರ್​ ನೋಟಿಫಿಕೇಶನ್​ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್​ನಲ್ಲಿ ಈ ನೋಟಿಫಿಕೇಶನ್​ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ.

ಈ ಸ್ಮಾರ್ಟ್​ ಸ್ಪೀಕರ್​ ಇನ್ಮುಂದೆ ಹಣದ ವಾಹಿವಾಟಿನ ಮಾಹಿತಿಯನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಮರಾಠಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯನ್ನು ಕಂಪನಿ ನಡೆಸಿದೆ.

ವರ್ನಾಕ್ಯುಲರ್​(ಭಾಷೆ) ವಾಯ್ಸ್​ ನೋಟಿಫಿಕೇಶನ್ ಮೂಲಕ ಇದೀಗ ವ್ಯಾಪಾರಿಗಳು ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ಅವರು ಪೇಮೆಂಟ್​ ಕುರಿತಾದ ವಿವರಗಳ ಧೃಢೀಕರಣಕ್ಕೆ ಗ್ರಾಹಕರ ಸ್ಕ್ರೀನ್​ ನಲ್ಲಿ ನೋಡುವ ಅವಶ್ಯಕತೆ ಎದುರಾಗುವುದಿಲ್ಲ. ಜೊತೆಗೆ ತಮ್ಮ ಭಾಷೆಗಳಲ್ಲೇ ಕೇಳುವುದರಿಂದ ಅವರಿಗೆ ಮತ್ತಷ್ಟು ಖಾತ್ರಿ ದೊರಕಲಿದೆ ಎಂದು ಸಂಸ್ಥೆ ತಿಳಿಸಿದೆ.

ಸದ್ಯ ಈ ಪೋನ್​ ಪೇ ಸ್ಮಾರ್ಟ್​ ಸ್ಪೀಕರ್​ ಭಾರತದ ಉದ್ಯಮದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದು, ವ್ಯಾಪಾರಿಗಳು ಶೇ 90ರರಷ್ಟು ಬಳಕೆ ಮಾಡುತ್ತಿದ್ದಾರೆ. ಇದೀಗ ಭಾಷೆಗಳ ಸೌಲಭ್ಯ ಮತ್ತಷ್ಟು ವ್ಯಾಪಾರಿಗಳನ್ನು ಸೆಳೆಯಲಿದೆ. ವ್ಯಾಪಾರಿಗಳು ತಮ್ಮ ಬ್ಯುಸಿನೆಸ್​ ಆಪ್​​ ಮೂಲಕ ಯಾವುದೇ ಹೆಚ್ಚುವರಿ ಪಾವತಿ ಇಲ್ಲದೇ ಈ ಭಾಷಾ ಸೌಲಭ್ಯದ ಸೆಟ್ಟಿಂಗ್​​ ಪಡೆಯಬಹುದಾಗಿದೆ.

ಹೀಗೆ ಸೆಟ್​ ಮಾಡಿ: ಇನ್ನು ವ್ಯಾಪಾರಿಗಳು ಹೇಗೆ ಈ ಪ್ರಾದೇಶಿಕ ಭಾಷಾ ಆಯ್ಕೆಯನ್ನು ಈ ಫೋನ್​ ಪೇ ಸ್ಮಾರ್ಟ್​ ಸ್ಪೀಕರ್​ನಲ್ಲಿ ಪಡೆಯಬಹುದು ಎಂಬುದರ ಕುರಿತು ಸುಲಭ ಸೂಚನೆಗಳು ಇಲ್ಲಿವೆ.

ವ್ಯಾಪಾರಿಗಳು ತಮ್ಮ ಫೋನ್​ಪೇ ಬ್ಯುಸಿನೆಸ್​ ಆಯಪ್ ಅನ್ನು ತೆರೆಯಬೇಕು, ಇಲ್ಲಿ ಹೋಂ ಸ್ಕ್ರೀನ್​ನ ಸ್ಮಾರ್ಟ್​ ಸ್ಪೀಕರ್​ ಸೆಕ್ಷನ್​ಗೆ ಭೇಟಿ ನೀಡಿ, ಅಲ್ಲಿ ಲಾಕ್ವೆಜ್​ ಬಾರ್​ನಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಭಾಷೆ ಸ್ಮಾರ್ಟ್​ ಸ್ಪೀಕರ್​ ಸಾಧನದಲ್ಲಿ ಡೌನ್​ಲೋಡ್​ ಆಗಲಿದ್ದು, ಈ ಸಾಧನವೂ ಹೊಸ ಅಪ್​ಡೇಟ್​ ಭಾಷೆಯೊಂದಿಗೆ ರೀಬೂಟ್​​ ಆಗುತ್ತದೆ.


Spread the love

About Laxminews 24x7

Check Also

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ಭವಿಷ್ಯ ನುಡಿದಿದ್ದಾರೆ.

Spread the love ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ