Home / Uncategorized / ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ

ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ

Spread the love

ಕಲಬುರಗಿ: ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯತ್​ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ.

ಅಶೋಕ ಪ್ಯಾಟಿ (45) ಕೊಲೆಯಾದವರು. ಅಶೋಕ್ ಪ್ಯಾಟಿ ಪಕ್ಕದ ಮನೆಯ ಹಾಲಗಡ್ಲಾ ಕುಟುಂಬದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಮತ್ತು ಅವರ ಸಂಬಂಧಿಗಳು ಈ ಕೊಲೆ ಮಾಡಿದ್ದಾರೆ ಎಂದು ಮೃತನ‌ ಪತ್ನಿ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ ?: ಕೊಲೆಯಾದ ಅಶೋಕ್ ಪ್ಯಾಟಿ ಮತ್ತು ಕೊಲೆ ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದರಾಗಿದ್ದು, ಎರಡು ಕುಟುಂಬದ ನಡುವೆ ಈ ಮೊದಲು ಅನ್ಯೋನ್ಯತೆ ಇತ್ತು. ಆದರೆ ಕಳೆದ‌ ಎರಡು ವರ್ಷಗಳಿಂದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ‌ ನಡುವೆ ವೈಷಮ್ಯ ಬೆಳದಿತ್ತು. ಮೃತ ಅಶೋಕ್​ ತಮ್ಮ ಪರಿಚಯಸ್ಥ ಇಮಾಮ್ ಬಿ ಅನ್ನೋ ಮಹಿಳೆಗೆ ಮಧ್ಯಸ್ಥಿಕೆ‌ ವಹಿಸಿ ಐದು ವರ್ಷದ ಹಿಂದೆ ಆರೋಪಿ ಜಾನಪ್ಪ ಅವರ ಚಿಕ್ಕಮ್ಮಳಾದ ಶಾಂತಮ್ಮ ಅವರಿಂದ ಐದು‌ ಸಾವಿರ ರೂಪಾಯಿ ಸಾಲ ಕೊಡಿಸಿದ್ದರು.

ಆದರೆ ಅವರು ಹಣ ಮರಳಿ ಕೊಟ್ಟಿರಲಿಲ್ಲ, ಹೀಗಾಗಿ ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಅಶೋಕ್​ಗೆ ಜಾನಪ್ಪ ಮತ್ತು ಆತನ ಸಂಬಂಧಿ ಹಣಕ್ಕಾಗಿ ಪೀಡಿಸುತ್ತಿದ್ದರಂತೆ. ಇದೇ ವಿಷಯವಾಗಿ ಕಳೆದ ಎರಡು ವರ್ಷಗಳಿಂದ ಎರಡು‌ ಕುಟುಂಬಗಳ‌ ಮಧ್ಯೆ ಮನಸ್ತಾಪ ಉಂಟಾಗಿ ಆಗಾಗ ಜಗಳ ಕೂಡಾ ನಡೆದಿವೆ. ಇದೇ ಹಣಕಾಸಿನ ವಿಚಾರವಾಗಿ ಭಾನುವಾರ ಅಶೋಕ್​ ಹಾಗೂ ಆತನ ಪುತ್ರನೊಂದಿಗೆ ಜಾನಪ್ಪ ಜಗಳವಾಡಿದ್ದಾನೆ. ಈ ವೇಳೆ ಜಾನಪ್ಪ ಅಶೋಕನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಕೂಡಾ ಹಾಕಿದ್ದ ಎಂದು ಹೇಳಲಾಗುತ್ತಿದೆ


Spread the love

About Laxminews 24x7

Check Also

ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು

Spread the love Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ