ಬೆಳಗಾವಿಯ ಆಂಜನೇಯ ನಗರದ ಸರ್ಕಾರಿ ಶಾಲೆಗೆ ಬೇಟಿ ನೀಡಿದ ಉತ್ತರ ಮತಕ್ಷೇತ್ರದ ಶಾಸಕ ಆಸೀಪ್ ರಾಜು ಸೇಠ್ ಶಾಲೆಯ ಸ್ಥಿತಿಗತಿ,ಕೊರತೆ ಹಾಗೂ ನೂನ್ಯತೆ ಮತ್ತು ಮಕ್ಕಳ ಶಿಕ್ಷಣದ ಕುರಿತು ಪರಶೀಲನೆ ನಡೆಸಿದರು.
ಸರ್ಕಾರಿ ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ 1ನೇ ತರಗತಿಯಿಂದ 7ನೇ ತರಗತಿಯಲ್ಲಿ ಕೇವಲ 33 ವಿದ್ಯಾರ್ಥಿಗಳ ಇರುವುದನ್ನು ನೋಡಿ ಕಳವಳ ವ್ಯಕ್ತಪಡಿಸಿದರು.ಅಲ್ಲದೆ ಧ್ವಜ ಕಂಬಕ್ಕೆ ಹಾನಿ ಹಾಗೂ ಹಳೆಯ ಶಿತಲವ್ಯಸ್ಥೆಯ ಕಟ್ಟಡಗಳು ಮತ್ತು ಹಲವು ದಿನಗಳಿಂದ ಮುಚ್ಚಿದ್ದ ಸ್ಮಾರ್ಟ್ ಬೋರ್ಡ್ ಕೊಠಡಿಗೆ ಬೀಗ ಹಾಕಲಾಗಿದ್ದು, ಅದರ ಮೇಲೆ ಧೂಳು ತುಂಬಿಕೊಂಡಿದ್ದ ಡೆಸ್ಕ್ ಹಾಗೂ ಟೇಬಲ್ಗಳನ್ನು ಶಾಸಕರು ಸ್ವತಃ ಪರಿಸಿಲಿಸಿದರು.
ಸರ್ಕಾರಿ ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳಿಂದ ವಂಚಿತರು ಹಾಗೂ ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದಿರುವ ಬಗ್ಗೆ ಶಿಕ್ಷಕರೊಂದಿದೆ ವಿಚಾರಿಸಿ ಬಿ.ಇ.ಓ.ರವಿ ಭಜಂತ್ರಿ ಅವರಿಗೆ , ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಒದಗಿಸಲಾದ ಯಾವುದೇ ಸಹಾಯವನ್ನು ಆದಷ್ಟು ಬೇಗ ಒದಗಿಸಿಕೊಡಲಾಗುವುದು ಎಂದು ಹೇಳಿದರು.