Breaking News

ಕರಡಿಗುದ್ದಿ, ಡಾ.ದೀಕ್ಷಿತ್‌ಗೆ ‘ಸಿರಿಗನ್ನಡ ಗೌರವ’

Spread the love

ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022ನೇ ಸಾಲಿನ ‘ಸಿರಿಗನ್ನಡ ಗೌರವ’ ಮತ್ತು 2021ನೇ ಸಾಲಿನ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರಕಟಿಸಿದೆ.

ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ.ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ.ಮಾಧವ ದೀಕ್ಷಿತ ಭಾಜನರಾಗಿದ್ದಾರೆ.

ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ‘ಉರಿಯ ಪೇಟೆಯಲ್ಲಿ’ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ ‘ಬೆಳಕ ನಿಚ್ಚಣಿಕೆ’ ಕೃತಿ ಆಯ್ಕೆಯಾಗಿವೆ.

ಜೀವನಮಾನ ಸಾಧನೆ ಪ್ರಶಸ್ತಿಗಳು: ಲೇಖಕರ ಜೀವಮಾನ ಸಾಧನೆಗಾಗಿ ಪ್ರೊ.ಸಿ.ಕೆ.ನಾವಲಗಿ ಅವರಿಗೆ ಪ್ರೊ.ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ, ಲೇಖಕಿಯರ ಜೀವನಮಾನ ಸಾಧನೆಗಾಗಿ ಶೀಲಾ ಅಂಕೋಲಾ ಅವರಿಗೆ ಡಾ.ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ, ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಶೈಲಜಾ ಬಿಂಗೆ ಅವರಿಗೆ ಸುಮನ ಗುರುನಾಥ ಹುದಲಿ ದತ್ತಿ ಪ್ರಶಸ್ತಿ, ಬಾಳಪ್ಪ ವೀರಪ್ಪ ಚಿನಗುಡಿ (ಮಾಧ್ಯಮಿಕ) ಅವರಿಗೆ ವೆಂ.ಲ.ಜೋಶಿ ಸ್ಮಾರಕ ದತ್ತಿ ಪ್ರಶಸ್ತಿ, ಜಿಲ್ಲೆಯ ಉತ್ತಮ ಪ್ರಕಾಶನ ಸಂಸ್ಥೆಗೆ ರಾಜಗುರು ಸಂಸ್ಥಾನಮಠ ಪ್ರಕಾಶನಕ್ಕೆ ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ, ಮುಕುಂದ ಗೋರೆ ಅವರಿಗೆ ಸಂಗೀತ ಪ್ರತಿಷ್ಠಾನ ಬೆಳಗಾವಿಯ ದತ್ತಿ ನಿಧಿಯ ‘ವೇಣುಗಾನ ಸಂಗೀತ ಪ್ರಶಸ್ತಿ’ ನೀಡಲಾಗಿದೆ.

ದತ್ತಿ ನಿಧಿ ಪುಸ್ತಕ ಪ್ರಶಸ್ತಿಗಳು: ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ- ಬಸವರಾಜ ಜಗಜಂಪಿಯವರ ಪ್ರವಾಸ ಕಥನ ‘ಯೂರೋಪ್‌ ಸಾಂಸ್ಕೃತಿಕ ಸೌರಭ’ ಕೃತಿಗೆ, ಪಿ.ವಿಜಯಕುಮಾರ ದತ್ತಿ ಪ್ರಶಸ್ತಿ- ಬಿ.ಎಸ್.ಜಗಾಪುರ ಅವರ ಮಕ್ಕಳ ಸಾಹಿತ್ಯ ‘ಜಾಣ ಬಾಲಕ’ ಕೃತಿಗೆ, ಶ್ರೀದೇವಿ ದಾಸಪ್ಪ ಶಾನಬಾಗ ಸ್ಮಾರಕ ದತ್ತಿ ಪ್ರಶಸ್ತಿ- ಡಾ.ಜೆ.ಪಿ.ದೊಡ್ಡಮನಿ ಅವರ ಅನುವಾದ ಸಾಹಿತ್ಯ ‘ಭಾರತ ದೇಶದ ಪ್ರಥಮ ಶಿಕ್ಷಕಿ- ಸಾವಿತ್ರಿಬಾಯಿ ಫುಲೆ’ ಕೃತಿಗೆ, ಡಾ.ಹಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿ- ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ ‘ಆರನೇ ಬೆರಳು’ ಕೃತಿಗೆ, ಎಸ್.ಎಂ. ಕುಲಕರ್ಣಿ ಷಷ್ಠ್ಯಬ್ಧಿ ಸಮಿತಿ ದತ್ತಿ ನಿಧಿ ಪ್ರಶಸ್ತಿ- ಬಸು ಬೇವಿನಗಿಡದ ಅವರ ವಿಮರ್ಶಾ ಕೃತಿ ‘ಬೆಳಕ ತೋರಣ’ಕ್ಕೆ ಬಂದಿವೆ.

ಅದೇ ರೀತಿ, ಚಂದ್ರವ್ವ ಧರ್ಮಾಜಿ ಅನಗೋಳ ಸ್ಮಾರಕ ದತ್ತಿ ಪ್ರಶಸ್ತಿ- ಡಾ.ಶೋಭಾ ನಾಯಕ ಅವರ ಕವನ ಸಂಕಲನ ‘ಶಯ್ಯಾಗಾರದ ಸುದ್ದಿಗಳು’ ಕೃತಿಗೆ, ಡಾ.ಎಂ.ಎಲ್.ತುಕ್ಕಾರ ಅಭಿನಂದನಾ ಸಮಿತಿ ದತ್ತಿ ಪ್ರಶಸ್ತಿ- ರಂಜನಾ ನಾಯಿಕ ಅವರ ನಾಟಕ ಸಂಕಲನ ‘ಇಪ್ಪತ್ತೊಂದು ನೆರಳು ಬೆಳಕಿನಾಟ’ ಕೃತಿಗೆ, ಶಿವಕವಿ ಉಳವೀಶ ಹುಲೇಪ್ಪನವರ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ- ಅಶೋಕ ಮಳಗಲಿ ಅವರ ‘ನೂರೊಂದು ಚುಟುಕು ಚಟಾಕಿಗಳು’ ಕೃತಿಗೆ, ಅಪ್ಪಾಸಾಹೇಬ ಸದರಜೋಶಿ ಕುಟುಂಬದ ದತ್ತಿ ಪ್ರಶಸ್ತಿ- ವೈಚಾರಿಕ ಲೇಖನಗಳು ಡಾ.ಆರ್.ಬಿ. ಚಿಲಮಿ ಅವರ ‘ಬದುಕಿನ ಅನ್ಯನ್ಯತೆಗೆ ದಾರಿದೀಪಗಳು’ ಕೃತಿಗೆ ನೀಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.

2021ನೇ ಸಾಲಿನ ಪುಸ್ತಕಗಳನ್ನು ಬಿ.ಆರ್.ಪೊಲೀಸ್‌ ಪಾಟೀಲ ಮತ್ತು ಸಂಧ್ಯಾ ಹೊನಗುಂಟಕರ ಅವರು ಮೌಲ್ಯಮಾಪನ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ನಿಗದಿಯಾದ ಮೇಲೆ ತಿಳಿಸಲಾಗುತ್ತದೆಂದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ ಕುಲಕರ್ಣಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೈಲಹೊಂಗಲ | ಮೊಹರಂ ಸಿದ್ಧತೆ: ಚಿನಕೋಲು, ಹುಲಿ‌ಕುಣಿತದ ಸದ್ದು

Spread the love ಬೈಲಹೊಂಗಲ: ಸರ್ವಧರ್ಮ ಸಮನ್ವಯದ ಸಂದೇಶ ಸಾರುವ ಮೊಹರಂ ಹಬ್ಬದ ಸಂಭ್ರಮದ ಆಚರಣೆಗಾಗಿ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ