Breaking News

40 ಪರ್ಸೆಂಟ್ ಕಮಿಷನ್ ಆರೋಪ: ಇನ್ಮುಂದೆ ರಾಜ್ಯದ ಗುತ್ತಿಗೆದಾರರಿಗೆ ಸಂಪೂರ್ಣ ಆನ್‌ಲೈನ್‌ ಪಾವತಿ

Spread the love

ರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿಬಂದ ಬಳಿಕ ರಾಷ್ಟ್ರ ಮಟ್ಟದಲ್ಲಿ ಉಂಟಾದ ಮುಜುಗರವನ್ನು ಸ್ವಲ್ಪಮಟ್ಟಿಗೆ ಸರಿಪಡಿಸಲು ಮುಂದಾಗಿರುವ ಸರ್ಕಾರ, ಇನ್ಮುಂದೆ ಗುತ್ತಿಗೆದಾರರ ಪಾವತಿಗಾಗಿ ಆನ್ಲೈನ್ ವ್ಯವಸ್ಥೆಯು ಕಾರ್ಯರೂಪಕ್ಕೆ ತರಲಿದೆ. ಬೆಂಗಳೂರು: ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿಬಂದ ಬಳಿಕ ರಾಷ್ಟ್ರ ಮಟ್ಟದಲ್ಲಿ ಉಂಟಾದ ಮುಜುಗರವನ್ನು ಸ್ವಲ್ಪಮಟ್ಟಿಗೆ ಸರಿಪಡಿಸಲು ಮುಂದಾಗಿರುವ ಸರ್ಕಾರ, ಇನ್ಮುಂದೆ ಗುತ್ತಿಗೆದಾರರ ಪಾವತಿಗಾಗಿ ಆನ್ಲೈನ್ ವ್ಯವಸ್ಥೆಯು ಕಾರ್ಯರೂಪಕ್ಕೆ ತರಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬಜೆಟ್ ಭಾಷಣದಲ್ಲಿ ಮಾತನಾಡಿ, ‘ಕಾರ್ಪೊರೇಷನ್ ವ್ಯಾಪ್ತಿಗೆ ಒಳಪಡುವ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಗುತ್ತಿಗೆದಾರರಿಗೆ ನೇರವಾಗಿ ಆನ್ಲೈನ್ ಬಿಲ್ ಪಾವತಿ ಮಾಡಲು ಆನ್ಲೈನ್ ಯೋಜನಾ ನಿರ್ವಹಣಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು’ ಎಂದು ಹೇಳಿದ್ದಾರೆ. ಈ ಕ್ರಮವನ್ನು ಗುತ್ತಿಗೆದಾರರು ಮತ್ತು ಸರ್ಕಾರಿ ಸಂಸ್ಥೆಗಳ ಉನ್ನತ ಅಧಿಕಾರಿಗಳು ಸ್ವಾಗತಿಸಿದ್ದಾರೆ ಮತ್ತು ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ. ತನ್ನ ಕಾಮಗಾರಿಗಳಿಗೆ ಗರಿಷ್ಠ ಸಂಖ್ಯೆಯ ಗುತ್ತಿಗೆದಾರರನ್ನು ನಿಯೋಜಿಸುವ ಬಿಬಿಎಂಪಿ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಅಭಿವೃದ್ಧಿ ಮಂಡಳಿ ಈಗಾಗಲೇ ಸಂಪೂರ್ಣ ಆನ್ಲೈನ್ ವ್ಯವಸ್ಥೆಯನ್ನು ಮಾಡಿದ್ದು, ಬಿಡಬ್ಲ್ಯುಎಸ್ಎಸ್ಬಿ, ಬಿಡಿಎ, ನೀರಾವರಿ ಮತ್ತು ಇತರ ಇಲಾಖೆಗಳಲ್ಲಿ ಈಗ ಭಾಗಶಃ ಆನ್ಲೈನ್ ಪಾವತಿ ವ್ಯವಸ್ಥೆ ಆಗಿದೆ. ಗುತ್ತಿಗೆದಾರರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿ, ‘ನಾನು ಇನ್ನೂ 50 ಲಕ್ಷ ರೂಪಾಯಿಗಳನ್ನು ಸರ್ಕಾರದಿಂದ ಪಡೆಯಬೇಕಾಗಿದೆ.

ನಾನು ಬಹಳ ಹಿಂದೆಯೇ ನನ್ನ ಬಿಲ್ಗಳನ್ನು ಸಲ್ಲಿಸಿದ್ದೇನೆ ಮತ್ತು ಹಲವಾರು ಜ್ಞಾಪನೆಗಳ ಹೊರತಾಗಿಯೂ ಇನ್ನೂ ಪಾವತಿಗಾಗಿ ಕಾಯುತ್ತಿದ್ದೇನೆ. ಎಲ್ಲವೂ ಪಾರದರ್ಶಕವಾದರೆ ದೊಡ್ಡ ಪರಿಹಾರ ಸಿಗುತ್ತದೆ’ ಎಂದರು. ಗುತ್ತಿಗೆದಾರರು ತಮ್ಮ ಬಾಕಿ ಪಾವತಿಗಾಗಿ ಬಿಡಿಎ ಕಚೇರಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿರುವುದನ್ನು ಕೂಡ ಆಗಾಗ್ಗೆ ನಾವು ಕಾಣಬಹುದಾಗಿದೆ. ಬಿಡಬ್ಲುಎಸ್ಎಸ್ಬಿಯ ಮುಖ್ಯ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಟಿಎನ್‌ಐಇ ಜೊತೆಗೆ ಮಾತನಾಡಿ, ಜಲ ಮಂಡಳಿಯ ಬಿಲ್ ಪಾವತಿ ಸಂದರ್ಭದಲ್ಲಿ, ನಾವು ಆರ್ಟಿಜಿಎಸ್ ಮೂಲಕ ಆನ್ಲೈನ್ನಲ್ಲಿ ಪಾವತಿ ಮಾಡುತ್ತೇವೆ.

ಆದರೆ, ಗುತ್ತಿಗೆದಾರರು ಇನ್ನೂ ತಮ್ಮ ಎಲ್ಲಾ ಬಿಲ್ಗಳನ್ನು ಭೌತಿಕವಾಗಿ ಸಲ್ಲಿಸಬೇಕಾಗಿದೆ. ಸಲ್ಲಿಕೆ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿಯೇ ಮಾಡುವಂತೆ ನಾವು ಈಗ ಟೆಂಡರ್ಗಳನ್ನು ಕರೆದಿದ್ದೇವೆ. ಬಿಬಿಎಂಪಿ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮಾಡಿದೆ’ ಎಂದು ತಿಳಿಸಿದರು. ಇದರ ಪ್ರಯೋಜನಗಳ ಬಗ್ಗೆ ಕೇಳಿದಾಗ, ‘ಇದು ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.

ಆನ್ಲೈನ್ನಲ್ಲಿ ತೆಗೆದುಕೊಂಡರೆ, ನಿರ್ದಿಷ್ಟ ಬಿಲ್ ಎಲ್ಲಿ ಸಿಲುಕಿಕೊಂಡಿದೆ ಎಂಬುದು ತಿಳಿಯುತ್ತದೆ. ಗುತ್ತಿಗೆದಾರರಿಗೆ ಪಾವತಿಗಳು ಹೆಚ್ಚು ವೇಗವಾಗಿ ಆಗುತ್ತವೆ’ ಎನ್ನುತ್ತಾರೆ. ತಮ್ಮ ಹೆಸರುಹೇಳಲಿಚ್ಛಿಸದ ಮತ್ತೋರ್ವ ಅಧಿಕಾರಿ ಮಾತನಾಡಿ, ‘ಈ ಕ್ರಮವು ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಗುತ್ತಿಗೆದಾರರು ತಮ್ಮ ಬಿಲ್ಗಳ ಕ್ಲಿಯರೆನ್ಸ್ಗಾಗಿ ತಿಂಗಳುಗಟ್ಟಲೆ ಕಾಯುತ್ತಾರೆ ಮತ್ತು ಬಿಲ್ಗಳನ್ನು ತೆರವುಗೊಳಿಸಲು ಕೆಲವು ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ. ಸಲ್ಲಿಸಿದ ಬಿಲ್ಗಳು ಕಾಣೆಯಾಗಿವೆ ಮತ್ತು ಕೆಲವೊಮ್ಮೆ ಅವುಗಳು ಏನಾದವು ಎಂಬುದು ಯಾರಿಗೂ ತಿಳಿದಿರುವುದಿಲ್ಲ’ ಎಂದರು. 2015 ರಿಂದ ಗುತ್ತಿಗೆದಾರರಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ನಲ್ಲಿವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love

About Laxminews 24x7

Check Also

ಸುಳಗಾ ಗ್ರಾಮದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

Spread the love ಸುಳಗಾ ಗ್ರಾಮದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ(ಯು) ಗ್ರಾಮದಲ್ಲಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ