ಶಿವಮೊಗ್ಗ: ಡಬಲ್ ಬ್ಯಾರಲ್ ಗನ್ ಮೂಲಕ ಗುಂಡು ಹಾರಿಸಿ ಹೊಸ ವರ್ಷವನ್ನು ಸ್ವಾಗತಿಸುವ ಧಾವಂತಕ್ಕೆ ನಗರದಲ್ಲಿ ಎರಡು ಜೀವಗಳು ಬಲಿಯಾಗಿವೆ.
ಇಲ್ಲಿನ ವಿದ್ಯಾನಗರದ ನಿವಾಸಿ ಮಂಜುನಾಥ ಓಲೇಕಾರ, ತಮ್ಮ ಮನೆಯ ಮಹಡಿಯ ಮೇಲೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶನಿವಾರ ರಾತ್ರಿ ಗನ್ಗೆ ಗುಂಡು ತುಂಬುವಾಗ ಆಕಸ್ಮಿಕವಾಗಿ ಸಿಡಿದ ಅದು ಎಚ್.ಯು.
ವಿನಯ್ (34) ಅವರಿಗೆ ತಗುಲಿ ತೀವ್ರವಾಗಿ ಗಾಯಗೊಂಡರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯಿಂದ ತೀವ್ರವಾಗಿ ಘಾಸಿಗೊಳಗಾದ ಮಂಜುನಾಥ ಓಲೇಕಾರ (67) ನಂತರ ಹೃದಯಾಘಾತದಿಂದ ಮೃತಪಟ್ಟರು. ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ವಿನಯ್ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದರು.
ಗುಂಡೇಟಿಗೆ ಬಲಿಯಾದ ವಿನಯ್ ಹೊಸನಗರದ ನಿವಾಸಿಯಾಗಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿ
ದ್ದರು. ಮಂಜುನಾಥ ಓಲೇಕಾರ ಅವರಿಗೆ ತೋಟ ಇದ್ದು, ಗನ್ ಪರವಾನಗಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.