Breaking News

ಧಾರವಾಡ : ಮೆಕ್ಕಾಗೆ ತೆರಳಿದ್ದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು

Spread the love

ಧಾರವಾಡ : ಮೆಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿಯೋರ್ವರು ಹೃದಯಾಘಾತದಿಂದ ಸೌದಿಯ ಮೆಕ್ಕಾದಲ್ಲಿ ನಿಧನ ಹೊಂದಿರುವ ಘಟನೆ ನಡೆದಿದೆ.

ಮೃತರನ್ನು ಜಿಲ್ಲೆಯ ವರವ ನಾಗಲಾವಿಯ ಸೈಯದ್​ ದಾದಾಪೀರ ಪೀರಜಾದೆ (70) ಎಂದು ಗುರುತಿಸಲಾಗಿದೆ.

ಕಳೆದ ಅ.9 ರಂದು ಧಾರವಾಡದಿಂದ ಉಮ್ರಾಗಾಗಿ ಪೀರಜಾದೆ ಸೌದಿಗೆ ತೆರಳಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ಗುರುಗಳು ಆಗಿದ್ದ ದಾದಾಪೀರ ಪೀರಜಾದೆ ಇವರ ಜೊತೆಯಲ್ಲಿ ಕುಟುಂಬದ ಕೆಲ‌ ಸದಸ್ಯರು ಕೂಡಾ ಹೋಗಿದ್ದರು ಎನ್ನಲಾಗಿದೆ. ಪೀರಜಾದೆ ಅವರ ಅಂತ್ಯಕ್ರಿಯೆ ಮೆಕ್ಕಾದಲ್ಲೇ ಕುಟುಂಬಸ್ಥರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ