Breaking News

ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ: ಮೃತ್ಯುಂಜಯ ಮಹಾ ಸ್ವಾಮಿಗಳು

Spread the love

ಬೆಳಗಾವಿ ಜಿಲ್ಲೆಯ ಜನಪ್ರನಿಧಿಗಳು 2023 ರ ಚುನಾವಣೆಯಲ್ಲಿ ನೋಟಾ ಮತ ಪಡೆಯಲು ಸಿದ್ದರಾಗಿ ಎಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಮಹಾ ಸ್ವಾಮಿಗಳು ಹೇಳಿದರು.

ಅವರು 2ಎ ಮಿಸಲಾತಿಗಾಗಿ ಸೇಪ್ಟಂಬರ 26 ರಂದು ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಸತ್ಯಾಗ್ರಹ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಮಾಡುವ ಕುರಿತು ರಾಜ್ಯದ ಪ್ರತಿ ತಾಲೂಕಿನಲ್ಲಿ ಜಾಗ್ರತಾ ಜಾಥಾಗಳನ್ನು ಹಮ್ಮಿಕೊಂಡು ಇಂದು ಹುಕ್ಕೇರಿ ನಗರದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಬಸವಣ್ಣವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ತಾಲೂಲಾ ಮಟ್ಟದ ಜಾಥಾಕ್ಕೆ ಚಾಲನೆ ನೀಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬರುವ ಸೆಪ್ಟಂಬರ್ 26 ರಂದು ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ರಾಜ್ಯದ ಪ್ರತಿ ತಾಲೂಕಿನಿಂದ ನಮ್ಮ ಬಸವಾಭಿಮಾನಿಗಳು ಭಾವವಹಿಸಲಿದ್ದಾರೆ ವಿಷೇಶವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಬರುವ ಅಧಿವೇಶನದಲ್ಲಿ ಪಂಚಮಸಾಲಿಗೆ 2 ಎ ಪರವಾಗಿ ದ್ವನಿ ಎತ್ತಬೇಕು ಹಾಗೂ 2022 ರ ವಳಗಾಗಿ ಈ ಸಮಾಜಕ್ಕೆ ನ್ಯಾಯ ವದಗಿಸಬೇಕು ಯಾರು ದ್ವನಿ ಎತ್ತುವದಿಲ್ಲೋವೋ ಅವರಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಮತ ಬಿಳುವದು ಗ್ಯಾರಂಟಿ ಇದರಿಂದ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬಿಳುವದು ಎಂದರು .


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ