Breaking News

ಹೈಕೋರ್ಟ್‌ನ ಬೆಂಗಳೂರು , ಧಾರವಾಡ, ಕಲಬುರಗಿ ಪೀಠಗಳಿಗೆ 5 ದಿನ ರಜೆ

Spread the love

ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಆಗಸ್ಟ್‌ 29ರಂದು ರಜೆ ಘೋಷಿಸಲಾಗಿದೆ.

ಈ ಕುರಿತು ಹೈಕೋರ್ಟ್‌ ಪ್ರಭಾರಿ ರಿಜಿಸ್ಟ್ರಾರ್‌ ಜನರಲ್‌ ಬಿ. ಮುರಳೀಧರ ಪೈ ಅಧಿಸೂಚನೆ ಹೊರಡಿಸಿದ್ದಾರೆ.

 

ಆ.29ರ ರಜೆಯ ಬದಲಿಗೆ ಅಕ್ಟೋಬರ್‌ 15ರಂದು ಕೆಲಸದ ದಿನ ಎಂದು ಘೋಷಿಸಲಾಗಿದ್ದು, ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಅಕ್ಟೋಬರ್‌ 15ರಂದು ಕಲಾಪ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆ. 27 ಮತ್ತು 28 ಕ್ರಮವಾಗಿ ಶನಿವಾರ ಮತ್ತು ರವಿವಾರ ಹೈಕೋರ್ಟ್‌ನ ರಜಾ ದಿನಗಳು. ಆ.30ರಂದು ಸ್ವರ್ಣಗೌರಿ ವ್ರತ ನಿಮಿತ್ತ ಹೈಕೋರ್ಟ್‌ ಬೆಂಗಳೂರು ಪ್ರಧಾನಪೀಠ, ಧಾರವಾಡ-ಕಲಬುರಗಿ ಪೀಠಗಳಿಗೆ ರಜೆ ನೀಡಲಾಗಿದೆ. ಆ.31ರಂದು ವರಸಿದ್ಧಿ ವಿನಾಯಕ ವ್ರತ ರಜೆ ಇದೆ. ಆ.29ರಂದು ರಜೆ ಘೋಷಿಸಲಾಗಿರುವುದರಿಂದ ಸೆ.1ರಂದು ಕೋರ್ಟ್‌ ಕಲಾಪಗಳು ಪುನರಾರಂಭವಾಗಲಿವೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ