ಬೆಂಗಳೂರು: ಸಚಿವ ಸಂಪುಟಕ್ಕೆ ಮಾತ್ರವಲ್ಲ ಇಡೀ ಸರ್ಕಾರಕ್ಕೆ ಸೂಕ್ತ ಸರ್ಜರಿ ನಡೆಯಬೇಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ಜನಪರ ಆಡಳಿತ ನೀಡುವುದಕ್ಕಿಂತ ಚುನಾವಣೆ ದೃಷ್ಟಿಕೋನವೇ ಮುಖ್ಯ. ಸಂಪುಟಕ್ಕೆ ಮಾತ್ರವಲ್ಲ, ಐಸಿಯುನಲ್ಲಿರುವ ಇಡೀ ಸರ್ಕಾರಕ್ಕೇ ಸರ್ಜರಿ ಮಾಡಬೇಕಿದೆ. ಯಾವ ಸರ್ಜರಿ ಮಾಡಿದರೂ, ಎಷ್ಟೇ ಡಿಸಿಎಂ ಹುದ್ದೆ ಸೃಷ್ಟಿಸಿದರೂ ತಳ್ಳಿಕೊಂಡು ಹೋಗುತ್ತಿರುವ ಸರ್ಕಾರದ ಇಂಜಿನ್ ಸ್ಟಾರ್ಟ್ ಮಾಡಲಾಗದು. ಮ್ಯಾನೇಜ್ಮೆಂಟ್ ಸರ್ಕಾರ ಟೇಕಾಫ್ ಆಗಲಾರದು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಶೇ. 40ರಷ್ಟು ರೋಲ್ಕಾಲ್ ಸರ್ಕಾರದಲ್ಲಿ 100% ಗೋಲ್ಮಾಲ್ ನಡೆಯುವುದು ಸಾಮಾನ್ಯವಾಗಿದೆ. ಕಾನ್ಸ್ಟೇಟೆಬಲ್ಗಳ ಪಾಲಿನ ಅನ್ನ ನೀರಿನ ಭತ್ಯೆಗಳನ್ನು ಅಧಿಕಾರಿಗಳು ಲೂಟಿ ಮಾಡುತ್ತಿರುವುದು ಗೃಹಸಚಿವರ ಗಮನಕ್ಕೆ ಬರಲಿಲ್ಲವೇ?. ಪಿಎಸ್ಐ ನೇಮಕದಿಂದ ಹಿಡಿದು ಭತ್ಯೆ ಲೂಟಿಯವರೆಗೆ ಗೃಹ ಇಲಾಖೆಯ ಎಲ್ಲಾ ಅಕ್ರಮಗಳಿಗೂ ಗೃಹಸಚಿವರ ಅಸಾಮರ್ಥ್ಯ, ಭ್ರಷ್ಟತನವೇ ಕಾರಣ ಎಂದು ಕಿಡಿಕಾರಿದೆ.
Laxmi News 24×7