Breaking News

ಸೋನಿಯಾ ರಾಹುಲ್, ಡಿ.ಕೆ ಶಿವಕುಮಾರ್ ರನ್ನು ಕಿತ್ತುಹಾಕಬೇಕು ಎಂದ : ಸಿಎಂ ಇಬ್ರಾಹಿಂ

Spread the love

ಬೆಂಗಳೂರು: 2023ಕ್ಕೆ ಕುಮಾರಸ್ವಾಮಿ ಸಿಎಂ ಆಗೋದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಫೌಂಡೇಶನ್ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತಿನ ಮುಹೂರ್ತ ಬರೆದಿಟ್ಟುಕೊಳ್ಳಿ..

ಬಿಜೆಪಿಯವರಿಗೆ ಜೆಡಿಎಸ್ ನಂಬರ್ 1 ಆಗಿ ಬರತ್ತೆ ಎನ್ನೋದು ಗೊತ್ತಾಗಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗೋದು ಗೊತ್ತಾಗಿದೆ. ನಮ್ಮವರು 10 ಜನ ಜೆಡಿಎಸ್ ಗೆ ಬರ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಇಬ್ರಾಹಿಂ ತಿರುಗೇಟು ನೀಡಿದರು.

ರಮೇಶ್ ಕುಮಾರ್ ಭಾರೀ ಸಿದ್ದಾಂತ ಮಾತಾಡ್ತಾರೆ. ಇದೇ ಡಿ ಕೆ ಶಿವಕುಮಾರ್ ಕಾಂಗ್ರೆಸ್ ನ ಒಂದು ಓಟು ಬಿಜೆಪಿ ಒಂದು ಓಟು ಹಾಕ್ಸಿದ್ದು. ಇಬ್ಬರು ಧರ್ಮಪತ್ನಿಯರು ಒಂದೇ ಗಂಡ, ಏನು ನಾಟಕನಪ್ಪ ನಿಮ್ಮದು. ಕುಪೇಂದ್ರ ರೆಡ್ಡಿ ಓಟು ಕೇಳಕ್ಕೇ ಹೋದಾಗ ಸತೀಶ್ ರೆಡ್ಡಿ ಏನು ಹೇಳಿದ್ರಿ? ಸಿದ್ದರಾಮಯ್ಯಗೆ ಉಸಿರಿರಲಿಲ್ಲ. ಕೆಪಿಸಿಸಿ ಪ್ರೆಸಿಡೆಂಟ್ ಡಿ ಕೆ ಶಿವಕುಮಾರ್ ಬಿಜೆಪಿಗೆ ಓಟು ಹಾಕ್ಸಿದ್ದಾನೆ. ಸೋನಿಯಾ ರಾಹುಲ್, ಡಿ.ಕೆ ಶಿವಕುಮಾರ್ ರನ್ನು ಕಿತ್ತುಹಾಕಬೇಕು ಎಂದು ಹೇಳಿದರು.

ಸಿದ್ದರಾಮಯ್ಯರನ್ನು ವಿರೋಧ ಪಕ್ಷದಿಂದ ತೆಗೆದು ಹಾಕೋ ತಾಕತ್ತಿದೆಯಾ? ಸುರ್ಜೆವಾಲಾ ಎಲ್ಲಿ ಹೋದ್ಯಪ್ಪ ಡಬರಿವಾಲಾ? ಅವರವರ ಪಾಲು ಇಸ್ಕೊಂಡು ಊರು ಬಿಟ್ಟರು. ಅವನು ಬಂದ ಸೂಟ್ ಕೇಸ್, ಇವನು ಬಂದ ಸೂಟ್ ಕೇಸು. ಸೂಟ್ ಕೇಸ್ ಇಸ್ಕೊಳ್ಳೋದು ಬಹುತ್ ಅಚ್ಚಾ ಹೈ ಅಂತಾ ಹೇಳೋದು. ದೆಹಲಿಯಿಂದ ಬಂದವರೆಲ್ಲ ಹೀಗೆ ಸೂಟ್ ಕೇಸ್ ಎತ್ಕೊಂಡು ಹೋಗೋದು ಎಂದು ತಿಳಿಸಿದರು.

ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ
ಕುಪೇಂದ್ರ ರೆಡ್ಡಿ ಗೂಟ ಭಾರೀ ಗಟ್ಟಿ, ನಿಮಗೆ ಬುದ್ದಿ ಕಲಿಸ್ತಾರೆ. ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ. ಹಲಾಲ್ ಮಾಡಿದ್ದಾದರೂ ನಡಿತಿತ್ತು ಜಟ್ಕಾ ಮಾಡಿಬಿಟ್ಟರಲ್ಲಾ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೇನೆ. 


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ