Breaking News

ಪಂಚಾಯಿತಿ ಮುಂದೆ ಬುಟ್ಟಿ ಮತ್ತು ಪಿಕಾಸಿ ಹಿಡಿದುಕೊಂಡು ಪಂಚಾಯ್ತಿ ಎದುರುಗಡೆ ಧರಣಿ ಮಾಡಿದ ನರೇಗಾ ಕೂಲಿ ಕಾರ್ಮಿಕರು

Spread the love

ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯತಿ ಕಛೇರಿಗೆ ನರೇಗಾ ಕೂಲಿ ಕಾರ್ಮಿಕರಿಂದ ಗ್ರಾಮ ಪಂಚಾಯಿತಿ ಮುಂದೆ ಬುಟ್ಟಿ ಮತ್ತು ಪಿಕಾಸಿ ಹಿಡಿದುಕೊಂಡು ಪಂಚಾಯ್ತಿ ಎದುರುಗಡೆ ಧರಣಿ ಮಾಡಿದರು.

ಕಳೆದ 2ವರ್ಷಗಳ ಹಿಂದೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿರುವ ಕೂಲಿ ಕಾರ್ಮಿಕ ರಾದ ನಿಲ್ಲುವ ಬಾಳಪ್ಪ ಪಾಟೀಲ ಇವರಿಗೆ ಇನ್ನೂವರೆಗೆ ಸಂಬಳ ಬಂದಿಲ್ಲ ಇದನ್ನು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಸಂತೋಷ್ ಅವರಿಗೆ ಕಳೆದ 2 ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ ಈ ಪಂಚಾಯಿತಿಗೆ ನಾನು ಅಲೆದು ಅಲೆದು ಕಾಲದಲ್ಲಿರುವ ಚಪ್ಪಲಿ ಎಷ್ಟೋ ಜೋಡು ಅರೆದು ಹೋಗಿದ್ದಾವೆ ಆದರೆ ಇನ್ನೂ ತನಕ ನನಗೆ ಸಂಬಳ ಬರುತ್ತಿಲ್ಲ ಯಾವಾಗ ಬಂದರೂ ನಾಳೆ ಸಂಬಳ ಹಾಕುತ್ತೇನೆ ಎಂದು ಹೇಳುತ್ತಾರೆ ಆದರೆ ಸಂಬಳ ಮಾತ್ರ ಹಾಕುವುದಿಲ್ಲ ಎಂದು ಹೇಳಿದ ಗ್ರೂಪಿನ ಮುಖ್ಯಸ್ಥೆ.

ಹಲವು ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಬದಲಾಗಿದ್ದರಿಂದ ಬೇರೆಯವರ ಖಾತೆಗೆ ಕೂಲಿ ಮಾಡಿರುವ ಸಂಬಳ ಜಮಾ ಆಗುತ್ತಿದೆ ಇದನ್ನು ಹಲವು ಬಾರಿ ನಾವು ತಿಳಿಸಿದರು ಖಾತೆ ಸಂಖ್ಯೆ ಸರಿ ಮಾಡಿಕೊಡುತ್ತಿಲ್ಲ.

ಮತ್ತು ಎನ್ ಎಂ ಆರ್ ಕೊಡುವುದರಲ್ಲಿ ಕೆಲ ಕೂಲಿ ಕಾರ್ಮಿಕರು ಹೆಸರು ಬರುವುದಿಲ್ಲ ಎಷ್ಟು ಬಾರಿ ಹೇಳಿದರೂ ಕೇಳದ ಕಂಪ್ಯೂಟರ್ ಆಪರೇಟರ್ ಎಂದ ಕಾರ್ಮಿಕರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ