Breaking News

ಪುಂಡರೇ ನಷ್ಟ ತುಂಬಲಿ; ಗಲಭೆಕೋರರಿಂದಲೇ ದಂಡ ವಸೂಲಿಗೆ ಹೆಚ್ಚಿದ ಒತ್ತಡ

Spread the love

ಕೋಮು ಸಹಿತ ಎಲ್ಲ ಗಲಭೆ ಸಂದರ್ಭಗಳಲ್ಲಿ ಸಾರ್ವಜನಿಕ ಮತ್ತು ಸರಕಾರದ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಅದರ ನಷ್ಟ ವಸೂಲಿಯನ್ನು ಗಲಭೆಕೋರರಿಂದಲೇ ಮಾಡುವ ಪ್ರಕ್ರಿಯೆ ಚುರುಕಾಗಬೇಕು ಎಂಬ ಆಗ್ರಹ ರಾಜ್ಯದಲ್ಲಿ ತೀವ್ರವಾಗತೊಡಗಿದೆ.

 

ಹುಬ್ಬಳ್ಳಿ ಗಲಭೆ ಬೆನ್ನಲ್ಲೇ ಈ ಬೇಡಿಕೆ ಹೆಚ್ಚಿದೆ. ಸಾರ್ವಜನಿಕ ಹಾಗೂ ಸರಕಾರದ ಆಸ್ತಿಗೆ ನಷ್ಟ ವುಂಟಾದರೆ ಗಲಭೆಕೋರರು ಮತ್ತು ಪ್ರತಿ ಭಟನಕಾರರಿಗೆ ದಂಡ ವಿಧಿಸಬೇಕು. ಇದಕ್ಕೆ ಪೂರಕವಾಗಿ ಚಾಲ್ತಿಯಲ್ಲಿರುವ ಕಾನೂನನ್ನು ಮತ್ತಷ್ಟು ಕಠಿನಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಈ ಕಾನೂನಿನಡಿ ರಚನೆಯಾದ ಕ್ಲೇಮ್‌ ಕಮಿಷನ್‌ಗಳು ರಾಜ್ಯದ ವಿವಿಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

ಈ ನಡುವೆ, ವಿಶ್ವ ಹಿಂದೂ ಪರಿಷತ್‌ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಗಲಭೆ ಯಿಂದಾಗುವ ಆಸ್ತಿ ನಷ್ಟವನ್ನು ಗಲಭೆಕೋರ ರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿನ ಕಾನೂನನ್ನು ಜಾರಿಗೆ ತರಬೇಕು ಎಂದು ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ?

Spread the love ಬೆಂಗಳೂರು: ಸಿಎಂ ಸಿದ್ದರಾಮಯ್ಯ ಈಗಾಗಲೇ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಈ ನಿಟ್ಟಿ‌ನಲ್ಲಿ ಚರ್ಚೆ ನಡೆಸಲು ನ.15ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ