Breaking News

ಒಡೆದ ಸಮಾಜಕ್ಕೆ ಒಗ್ಗಟ್ಟಿನ ಸಂದೇಶ; ಸಿದ್ಧಾಂತ ಬೇರೆಯಾದ್ರೂ ವೈರಿಗಳಲ್ಲ..!

Spread the love

ಬೆಂಗಳೂರು: ಕಟಿಬದ್ಧ ಸ್ನೇಹಿತರೇ ಆದರೂ ಯಾವುದೋ ಒಂದು ಚಿಕ್ಕ ವಿಷಯಕ್ಕೆ ಬದ್ಧವೈರಿಗಳಾಗಿಬಿಡುತ್ತಾರೆ. ಅಂಥದ್ರದಲ್ಲಿ ರಾಜಕೀಯ ವೈರಿಗಳು, ಸಿದ್ಧಾಂತ ವಿಚಾರದಲ್ಲಿ ವಿಭಿನ್ನ ನಿಲುವು ಹೊಂದಿರೋರು ಆತ್ಮೀಯರಾಗಿ ಇರೋದು ತುಂಬಾನೇ ಕಡಿಮೆ. ಆದರೆ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಈ ವಿಚಾರದಲ್ಲಿ ತುಂಬಾ ಭಿನ್ನ.

ರಾಜಕೀಯ ವಿಚಾರದಲ್ಲಿ ಎಷ್ಟೇ ಕೆಸರೆರಚಾಡಿಕೊಂಡರೂ ವೈಯಕ್ತಿಕ ವಿಚಾರ, ಮಾನವೀಯ ನಿಲುವು ಅಂತಾ ಬಂದಾಗ ತುಂಬಾ ವಿನಮ್ರತೆಯಿಂದ ನಡೆದುಕೊಳ್ತಾರೆ. ಮೊದಲಿನಿಂದಲೂ ‘ಮಾದರಿ ನಡವಳಿಕೆ’ಯಲ್ಲಿ ಸೈಎನಿಸಿಕೊಂಡಿರುವ ಹಿರಿಯ ನಾಯಕರು ಇಂದು ಕೂಡ ಗ್ರೇಟ್ ಎನಿಸಿಕೊಂಡರು. ಸಮಾಜದಲ್ಲಿ ಉಂಟಾಗಿರುವ ಚಿಕ್ಕ ಕಲುಷಿತ ವಾತಾವರಣದಿಂದ ಜನಸಾಮಾನ್ಯರು ಗೊಂದಲಕ್ಕೆ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉಭಯ ನಾಯಕರು ಸೂಚ್ಯವಾಗಿ ನಡೆದುಕೊಂಡು ಸಮಾಜಕ್ಕೆ ಒಗ್ಗಟ್ಟಿನ ಸಂದೇಶವನ್ನ ಸಾರಿದ್ದಾರೆ.


Spread the love

About Laxminews 24x7

Check Also

ಗೃಹ ಕಾರ್ಮಿಕರಿಗೆ ಶೀಘ್ರದಲ್ಲೇ ಶಾಸನಬದ್ಧ ರಕ್ಷಣೆ, ಕನಿಷ್ಠ ವೇತನ; ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ

Spread the love ಬೆಂಗಳೂರು: ರಾಜ್ಯಾದ್ಯಂತ ಸುಮಾರು 8 ಲಕ್ಷ ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಮಹತ್ವದ ಕಾನೂನನ್ನು ಜಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ