Breaking News

ಸಾರಿಗೆ ಬಸ್​ನಲ್ಲಿಯೇ ಗಾಂಜಾ ಸಾಗಾಟಕ್ಕೆ ಯತ್ನ

Spread the love

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ (Pushpa) ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಧೂಳೆಬ್ಬಿಸಿದ್ದು ಸುಳ್ಳಲ್ಲ. ಆದರೆ, ಅನೇಕ ಖದೀಮರಿಗೆ ಈ ಸಿನಿಮಾದ ಕೆಲವು ಕಳ್ಳತನ ಮಾರ್ಗಗಳು ಪ್ರಯೋಗಿಸಲು ಮುಂದಾಗಿ (Bidar) ನಡೆದಿದೆ. ಬೀದರ್​ ಅತ್ತ ಮಹಾರಾಷ್ಟ್ರ (Maharashtra) ಇತ್ತ ತೆಲಂಗಾಣವನ್ನು (Telangana ) ಹಂಚಿಕೊಂಡಿರುವ ಜಿಲ್ಲೆ. ಪ್ರಮುಖ ವಾಣಿಜ್ಯ ಚಟುವಟಿಕೆಗಳಿಗಾಗಿ ಎರಡೂ ರಾಜ್ಯದ ಜನರು ಈ ಜಿಲ್ಲೆಯನ್ನೇ ಬಳಸಿಕೊಂಡು ಓಡಾಡುತ್ತಾರೆ.

ಸಾರಿಗೆ ಬಸ್​ನಲ್ಲಿಯೇ ಸಾಗಾಟಕ್ಕೆ ಯತ್ನ

ಗಡಿ ಜಿಲ್ಲೆಯಲ್ಲಿ ಕೆಲವು ಅಕ್ರಮಗಳ ಜೊತೆಗೆ ಗಾಂಜಾ (Marijuana) ಮಾರಾಟದ ಸದ್ದು ಜೋರಾಗಿಯೇ ಕೇಳಿ ಬಂದಿತ್ತು. ಇಷ್ಟು ದಿನಗಳ ಕಾಲ ಕಳ್ಳ ಖದೀಮರು ಸ್ವಂತ ವಾಹನಗಳನ್ನು ಬಳಸಿಕೊಂಡು ಗಾಂಜಾ ಸಾಗಾಟ ಮಾಡುತ್ತಿದ್ದರು. ಯಾವಾಗ ಇವರಿಗೆ ಬೀದರ್​ ಪೊಲೀಸರು ಸಿಂಹ ಸ್ವಪ್ನವಾದರೋ ಆಗ ಅವರು ಪರ್ಯಾಯ ಮಾರ್ಗ ಹುಡುಕಿದರು. ಸರ್ಕಾರಿ ಬಸ್​​ ನಲ್ಲಿ ಸಾರ್ವಜನಿಕರ ಸೋಗಿನಲ್ಲಿ ಈ ಕಳ್ಳರು ಗಾಂಜಾ ಸಾಗಣೆಗೆ ಮುಂದಾಗಿದ್ದಾರೆ. ಇದನ್ನು ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಖದೀಮರ ಆಟಾಟೋಪಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು, ಕಳ್ಳ ಮಾರ್ಗಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅವರ ಹೆಡೆ ಮುರಿಕಟ್ಟಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ

ಗಾಂಜಾ ಸಾಗಣೆದಾರರು ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮದ ಮಾರ್ಗವಾಗಿ ಎನ್ ಎಚ್ 65 ಹೈದರಾಬಾದ್‌- ಕಲಬುರಗಿ ಬಸ್‌ನಲ್ಲಿ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದಾರೆ. ಇದನ್ನು ತಿಳಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಹೈದ್ರಾಬಾದ್- ಕಲಬುರ್ಗಿ ಮಾರ್ಗದ ಎಕ್ಸ್ ಪ್ರೆಸ್ ಬಸ್ ತಡೆ ಹಿಡಿದಿದ್ದಾರೆ. ಈ ವೇಳೆ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಕೇಜಿ 8 ಪ್ಯಾಕೆಟ್ ನಲ್ಲಿ ಸಾಗಾಟ ಮಾಡುತ್ತಿದ್ದ 1 ಲಕ್ಷ 60 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ