Breaking News

ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

Spread the love

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ ಠಾಣೆ ಪೊಲೀಸರು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಎನ್​ ಗುಣರಾಜ್​ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣನ್​ ರಾಮಸ್ವಾಮಿ ಈ ಮಹತ್ವದ ಆದೇಶವನ್ನು ನೀಡಿದ್ದಾರೆ.

 

ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ತಮ್ಮ ಹೋಟೆಲ್​ ಅಥವಾ ರೆಸ್ಟಾರೆಂಟ್​ಗಳಲ್ಲಿ ವ್ಯಾಪಾರ ನಡೆಸುವ ಹಕ್ಕನ್ನು ಮಾಲೀಕರು ಹೊಂದಿದ್ದಾರೆ. ಅಲ್ಲದೇ 21ನೇ ವಿಧಿಯ ಅಡಿಯಲ್ಲಿ ಗ್ರಾಹಕರಿಗೂ ಆಹಾರ ಸೇವಿಸುವ ಹಕ್ಕು ಇದೆ. ಇಂತಹ ಸಂದರ್ಭದಲ್ಲಿ ಹೋಟೆಲ್​ಗಳನ್ನು ರಾತ್ರಿ ಸಮಯದಲ್ಲಿ ನಡೆಸದಂತೆ ತಡೆ ನೀಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ಕೃಷ್ಣನ್​ ರಾಮಸ್ವಾಮಿ ಹೇಳಿದ್ದಾರೆ.

ಸಂವಿಧಾನದ ಪರಿಚ್ಛೇದಗಳನ್ನು ಮೀರಿ ನಿಯಮಗಳನ್ನು ಜಾರಿಗೆ ತರವ ವೇಳೆಯಲ್ಲಿ ಸಮಂಜಸವಾದ ಹಾಗೂ ಪ್ರಾಮಾಣಿಕವಾದ ಕಾರಣವನ್ನು ಹೊಂದಿರಬೇಕು. ರೆಸ್ಟಾರೆಂಟ್ ಅಥವಾ ಕೆಫೆಗಳನ್ನು ನಡೆಸಲು ಕಾನೂನಿನ ಅಡಿಯಲ್ಲಿ ಯಾವುದೇ ಅಡ್ಡಿಯಿಲ್ಲ. ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಬೇಕು ಎಂಬ ಕಾರಣಕ್ಕೆ ಪೊಲೀಸರು ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯ ಹೇರುವಂತಿಲ್ಲ. ಈ ಮೂಲಕ ಪೊಲೀಸರು ತಿನ್ನಲೆಂದು ಹೋಟೆಲ್​ಗೆ ಬರುವ ಗ್ರಾಹಕರ ಹಕ್ಕನ್ನೂ ಕಸಿದುಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ