Breaking News

ಕುಚಿಕು ಗೆಳೆಯರಾದ ಬಡೇಮಿಯಾ-ಛೋಟೇಮಿಯಾ..?

Spread the love

ಸಿಎಂ ಇಬ್ರಾಹಿಂ ರೆಬೆಲ್ ಆಗಿರೋ ವಿಚಾರ ಕಾಂಗ್ರೆಸ್​​ನಲ್ಲಿ ಹೊಸ ಚರ್ಚೆ, ಆತಂಕ ಹುಟ್ಟುಹಾಕಿತ್ತು. ಇಬ್ರಾಹಿಂ ಮನವೊಲಿಕೆಗೂ ಕಸರತ್ತು ಶುರುವಾಗಿತ್ತು. ಇದು ಈಗಲೂ ನಡೆಯುತ್ತಲೇ ಇದೆ. ಇದರ ಭಾಗವಾಗಿ ನಿನ್ನೆ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಸಿ.ಎಂ ಇಬ್ರಾಹಿಂರನ್ನ ಭೇಟಿ ಮಾಡಿದ್ದಾರೆ. ಕೆಲ ಕಾಲ ಸೀಕ್ರೆಟ್ ಚರ್ಚೆಯನ್ನ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ.

ಭೇಟಿಯ ವೇಳೆ ಬಡೇ ಮಿಯಾಗೆ ಛೋಟೇ ಮಿಯಾ ಐಸ್​ಕ್ರೀಂ ತಿನ್ನಿಸಿದ್ದಾರೆ. ಸಿ.ಎಂ. ಇಬ್ರಾಹಿಂ ಬಾಯಿಗೆ ಖುದ್ದು, ಜಮೀರ್ ಐಸ್​ ಇಟ್ಟಿದ್ದಾರೆ. ಈ ಭೇಟಿ ರಾಜಕೀಯವಾಗಿ ಮಾತಿನ ಮಲ್ಲನ ಮನಸ್ಸು ಕರಗಿಸುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಪಕ್ಷವನ್ನ ಗಟ್ಟಿಗೊಳಿಸೋ ನಿಟ್ಟಿನಲ್ಲೂ ಉಭಯ ನಾಯಕರ ಮಾತುಕತೆ ನಡೆದಿದೆ ಎನ್ನಲಾಗಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ