Breaking News

ಸಿರವಾರ: ಪುತ್ರಿ ಸಹಿತ ತಾಯಿಯು ಬೆಂಕಿಯಲ್ಲಿ ಸಾವು

Spread the love

ಸಿರವಾರ(ರಾಯಚೂರು ಜಿಲ್ಲೆ): ಪಟ್ಟಣದ ಖಾಸಗಿ ಸಹಕಾರಿ ಪತ್ತಿನ ಸಂಘದ ಉದ್ಯೋಗಿಯಾಗಿದ್ದ ಶಿರೀಷಾ(32) ಅವರು ಪುತ್ರಿ ಭುವನಾ(5) ಸಹಿತ ಮನೆಯಲ್ಲಿಯೇ ಬೆಂಕಿಯಲ್ಲಿ ಸೋಮವಾರ ಸಜೀವ ದಹನವಾಗಿದ್ದಾರೆ.

ಇನ್ನೊಬ್ಬ ಪುತ್ರಿಯನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಪತಿ ಹೊರ ಹೋಗಿದ್ದರು.

ಮನೆಯಲ್ಲಿ ಸಂಬಂಧಿಗಳು ಕೂಡಾ ಹೊರಗೆ ಹೋಗಿದ್ದರು. ಮೃತ ಮಹಿಳೆಯ ತವರು ಮನೆ ಆಂಧ್ರಪ್ರದೇಶದ ಆದೋನಿಯಿಂದ ಯಾರೂ ಬಾರದ ಕಾರಣ ಪೊಲೀಸರು ತಡರಾತ್ರಿವರೆಗೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.

ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ