ಬೆಂಗಳೂರು: ನೈಋತ್ಯ ರೈಲ್ವೆ ವಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 232 ಕಿ.ಮೀ ಮಾರ್ಗದ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಈ ಹಣಕಾಸು ಅವಧಿ ಮುಗಿಯುವ ಮುನ್ನ ಮತ್ತೆ 200ಕ್ಕೂ ಹೆಚ್ಚು ಕಿ. ಮೀ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.
ಇದು ಡೀಸೆಲ್ ಎಂಜಿನ್ಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಂಜಿನ್ಗಳಿಗೆ ಬದಲಾಯಿಸಲು ಅನುವು ಮಾಡಿಕೊಡಲಿದೆ.
ಅಧಿಕೃತ ಹೇಳಿಕೆಯ ಪ್ರಕಾರ, 2016ರಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಸುಮಾರು 200 ಕಿಲೋ ಮೀಟರ್ ವಿದ್ಯುದ್ದೀಕರಣದ ಮಾರ್ಗವಿತ್ತು. ಅದು ಇದೀಗ 1,452 ಕಿ. ಮೀಗೆ ಹೆಚ್ಚಾಗಿದೆ. ಪ್ರಸ್ತುತ ಈ ವಲಯದ ಇಡೀ ಮಾರ್ಗದಲ್ಲಿ ಒಟ್ಟಾರೇ ಶೇ. 40 ರಷ್ಟು ವಿದ್ಯುದೀಕರಣಗೊಂಡಿದೆ ಎಂದು ಅದು ಹೇಳಿದೆ.
‘ಪ್ರಸಕ್ತ ಹಣಕಾಸು ವರ್ಷದಲ್ಲಿ 22 ರೈಲುಗಳನ್ನು ಈಗಾಗಲೇ ಎಲೆಕ್ಟ್ರಿಕ್ ಎಂಜಿನ್ಗಳೊಂದಿಗೆ ಓಡಿಸಲು ಎಲೆಕ್ಟ್ರಿಕ್ ಟ್ರಾಕ್ಷನ್ಗೆ ಪರಿವರ್ತಿಸಲಾಗಿದೆ. ಇನ್ನೇರಡು ದಿನಗಳಲ್ಲಿ ಇನ್ನೂ ನಾಲ್ಕು ಅಂತಹ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ತಿಳಿಸಿದ್ದಾರೆ.
ನೈರುತ್ಯ ರೈಲ್ವೆ ವಲಯವು ಮುಂದಿನ ಎರಡು ತಿಂಗಳಲ್ಲಿ ಕನಿಷ್ಠ 10 ರೈಲುಗಳನ್ನು ಎಲೆಕ್ಟ್ರಿಕ್ ಇಂಜಿನ್ಗಳಿಗೆ ಬದಲಾಯಿಸುವ ಗುರಿಯನ್ನು ಹೊಂದಿದೆ. ವಿದ್ಯುದ್ದೀಕರಣ ಪೂರ್ಣಗೊಂಡಿರುವ ವಿಭಾಗಗಳ ಮೇಲೆ ಕೇಂದ್ರೀಕರಿಸಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ನೈರುತ್ಯ ರೈಲ್ವೆ ವಲಯ 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ಗಳಿಗೆ ಬದಲಾಯಿಸಿದೆ.
10,000 ಲೀಟರ್ ಡೀಸೆಲ್ ಉಳಿತಾಯ: ಈ ಮಧ್ಯೆ ನೈರುತ್ಯ ರೈಲ್ವೆ ವಲಯ ಶನಿವಾರದಿಂದ ದಿನಕ್ಕೆ 10,000 ಲೀಟರ್ ಡೀಸೆಲ್ ನ್ನು ಉಳಿಸುತ್ತದೆ, ಎರಡು ಜೋಡಿ ರೈಲುಗಳು ವಿದ್ಯುತ್ ಇಂಜಿನ್ಗಳಿಗೆ ಬದಲಾಗುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಹಾಸನ- ಸೋಲಾಪುರ-ಹಾಸನ ಡೈಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 11312/11311) ಸೋಲಾಪುರ-ಯಶವಂತಪುರ- ಸೊಲ್ಲಾಪುರ ನಡುವೆ ಡೀಸೆಲ್ನಿಂದ ಎಲೆಕ್ಟ್ರಿಕ್ ಇಂಜಿನ್ಗೆ ಬದಲಾಗುತ್ತದೆ. ಇದು ಜನವರಿ 28 ರಿಂದ ಹಾಸನ ಕೊನೆಯಿಂದ ಮತ್ತು ಜನವರಿ 29 ರಿಂದ ಸೊಲ್ಲಾಪುರ ಕಡೆಯಿಂದ ಜಾರಿಯಲ್ಲಿರುತ್ತದೆ.
ಅದೇ ರೀತಿ ಮೈಸೂರು-ಬಾಗಲಕೋಟ-ಮೈಸೂರು ಬಸವ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17307/17308) ಮೈಸೂರು-ಸೋಲಾಪುರ-ಮೈಸೂರು ನಡುವೆ ಎಲೆಕ್ಟ್ರಿಕ್ ಲೋಕೋಗೆ ಬದಲಾಗಲಿದೆ