Breaking News

ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಏರ್​ಪೋರ್ಟ್​ಗೆ ಹೋಗಲು ಟ್ರ್ಯಾಕ್ಟರ್​ ಮೊರೆಹೋದ ಪ್ಯಾಸೆಂಜರ್ಸ್

Spread the love

ಬೆಂಗಳೂರು: ಹಲವು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಬೆಂಗಳೂರಿಗರನ್ನ ಕಂಗೆಡಿಸಿದೆ. ಇಂದು ಕೂಡ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇತ್ತ ದೇವನಹಳ್ಳಿ ಏರ್​ಪೋರ್ಟ್ ಬಳಿಯೂ ಭಾರೀ ಮಳೆಯಾಗಿದ್ದು ಏರ್​​ಪೋರ್ಟ್ ಅರೈವಲ್ ಮತ್ತು ಡಿಪಾರ್ಚರ್ ವೇ, ಪಾರ್ಕಿಂಗ್ ಬಳಿಯೂ ಕೆರೆಯಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

 

ಇತ್ತ ಏರ್​ಪೋರ್ಟ್​ಗೆ ಹೋಗುವ ಪ್ಯಾಸೆಂಜರ್​ಗಳು ಏರ್​​ಪೋರ್ಟ್​ಗೆ ತೆರಳಬೇಕಿದ್ದ ಬಸ್ ಸಿಗದೇ ಪರದಾಡುವಂತಾಗಿದೆ. ಈ ವೇಳೆ ದೇವರಂತೆ ಬಂದ ಟ್ರ್ಯಾಕ್ಟರ್ ಚಾಲಕನೋರ್ವ ಏರ್​ಪೋರ್ಟ್​ಗೆ ಹೋಗಲು ಕಾದು ಸುಸ್ತಾಗಿದ್ದ ಪ್ರಯಾಣಿಕರಿಗೆ ನೆರವಾಗಿದ್ದಾನೆ. ಪ್ರಯಾಣಿಕರನ್ನ ಟ್ರ್ಯಾಕ್ಟರ್​ಗೆ ಹತ್ತಿಸಿಕೊಂಡು ಏರ್​ಪೋರ್ಟ್​ಗೆ ಡ್ರಾಪ್ ಮಾಡಿ ಮಾನವೀಯತೆ ಮೆರೆದಿದ್ದಾನೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ