ಬೆಂಗಳೂರು: ಬಸವರಾಜ್ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲ್ಲಿಯವರೆಗೂ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಲ್ಲಿ ಭಾರೀ ಬದಲಾವಣೆಯಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಿಗೆ ಹೋದರೆ ಅಲ್ಲಿಗೆ ಈ ಜೋಡೆತ್ತು ಹೋಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಜೋರು ಚರ್ಚೆ ಶುರುವಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಹಿಂದೆ ಮುಂದೆಯೇ ಈ ಜೋಡೆತ್ತು ಓಡಾಡುತ್ತಿದೆ. ಆರ್. ಅಶೋಕ್ ಮತ್ತು ಸುಧಾಕರ್ ಸಿಎಂ ಎಲ್ಲಿಗೆ ಹೋದರೂ ಬೆಂಬಿಡದಂತೆ ಕಾಡುತ್ತಿದ್ದಾರೆ. ಒಂದು ದಿನ ಸುಧಾಕರ್, ಇನ್ನೊಂದು ದಿನ ಆರ್. ಅಶೋಕ್ ಶಿಫ್ಟ್ ವೈಸ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲೇ ಯಾವು ಕಾರ್ಯಕ್ರಮ ನಡೆದರೂ ಸಿಎಂ ಜತೆಗೆ ಈ ಇಬ್ಬರ ಹಾಜರಿ ಕಡ್ಡಾಯ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಆರ್. ಅಶೋಕ್ ಬೊಮ್ಮಾಯಿ ಅವರೊಂದಿಗೆ ಕಾಣಿಸಿಕೊಂಡಿದ್ದ್ದಾರೆ. ಎಲ್ಲಾ ದೆಹಲಿ ಪ್ರವಾಸದ ವೇಳೆಯೂ ಸಿಎಂ ಜತೆ ಸುಧಾಕರ್ ಹಾಜರಿ ಇರುತ್ತಾರೆ.