Breaking News

ಹೋದಲೆಲ್ಲಾ ಬೊಮ್ಮಾಯಿಗೆ ಜೋಡೆತ್ತುಗಳು ಸಾಥ್; ತೀವ್ರ ಚರ್ಚೆ ಹುಟ್ಟುಹಾಕಿದ ಆ ಇಬ್ಬರ ಉಪಸ್ಥಿತಿ..!

Spread the love

ಬೆಂಗಳೂರು: ಬಸವರಾಜ್​​​ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲ್ಲಿಯವರೆಗೂ ಕಂದಾಯ ಸಚಿವ ಆರ್​​.ಅಶೋಕ್​​ ಮತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​​​​​​​​ ಅವರಲ್ಲಿ ಭಾರೀ ಬದಲಾವಣೆಯಾಗಿದೆ. ಸಿಎಂ ಬಸವರಾಜ್​​ ಬೊಮ್ಮಾಯಿ ಎಲ್ಲಿಗೆ ಹೋದರೆ ಅಲ್ಲಿಗೆ ಈ ಜೋಡೆತ್ತು ಹೋಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಜೋರು ಚರ್ಚೆ ಶುರುವಾಗಿದೆ.

ಸಿಎಂ ಬಸವರಾಜ್​​ ಬೊಮ್ಮಾಯಿ ಹಿಂದೆ ಮುಂದೆಯೇ ಈ ಜೋಡೆತ್ತು ಓಡಾಡುತ್ತಿದೆ. ಆರ್​​. ಅಶೋಕ್​​ ಮತ್ತು ಸುಧಾಕರ್​​ ಸಿಎಂ ಎಲ್ಲಿಗೆ ಹೋದರೂ ಬೆಂಬಿಡದಂತೆ ಕಾಡುತ್ತಿದ್ದಾರೆ. ಒಂದು ದಿನ ಸುಧಾಕರ್​​, ಇನ್ನೊಂದು ದಿನ ಆರ್​​. ಅಶೋಕ್​​​ ಶಿಫ್ಟ್​ ವೈಸ್​​​ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲೇ ಯಾವು ಕಾರ್ಯಕ್ರಮ ನಡೆದರೂ ಸಿಎಂ ಜತೆಗೆ ಈ ಇಬ್ಬರ ಹಾಜರಿ ಕಡ್ಡಾಯ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಆರ್​​. ಅಶೋಕ್​​ ಬೊಮ್ಮಾಯಿ ಅವರೊಂದಿಗೆ ಕಾಣಿಸಿಕೊಂಡಿದ್ದ್ದಾರೆ. ಎಲ್ಲಾ ದೆಹಲಿ ಪ್ರವಾಸದ ವೇಳೆಯೂ ಸಿಎಂ ಜತೆ ಸುಧಾಕರ್​​​​ ಹಾಜರಿ ಇರುತ್ತಾರೆ.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ