Breaking News

ಹೊಟ್ಟೆ ಪಾಡಿಗಾಗಿ ಊರೂರು ಸುತ್ತುವ ಅಲೆಮಾರಿಗಳಿಗೆ ಸಿಕ್ಕಿಲ್ಲ ಕೊವಿಡ್ ಲಸಿಕೆ

Spread the love

ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ.

ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸುತ್ತಿದೆ. ರಾಜ್ಯಗಳಿಗೆ ಬೇಕಾಗುವ ಅಗತ್ಯ ಲಸಿಕೆ ಪೂರೈಕೆ ಮಾಡಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿದೆ. ಆದ್ರೆ ಕೊವಿಡ್ ಲಸಿಕಾ ಅಭಿಯಾನ ಅಲೆಮಾರಿಗಳಿಗೆ ತಲುಪಿಲ್ಲ. ಹೊಟ್ಟೆಪಾಡಿಗೆ ಊರೂರು ಸುತ್ತಿ ಕುಲುಮೆ ಮಾಡುವ ಜನರಿಗೆ ಲಸಿಕೆ ಸಿಕಿಲ್ಲ.

ಹೊಟ್ಟೆಪಾಡಿಗೆ ಊರೂರು ಸುತ್ತಿ ಜಾಗ ಸಿಕ್ಕ ಕಡೆ ಶೆಡ್​ ಹಾಕಿ, ಕೈಗೆ ಸಿಕ್ಕ ಕೆಲಸ ಮಾಡುತ್ತ ಮೂರು ಕಾಸು ಸಂಪಾದಿಸಿ ಜೀವನ ಸಾಗಿಸುವ ಅಲೆಮಾರಿಗಳ ಕಷ್ಟ, ಆರೋಗ್ಯದ ಬಗ್ಗೆ ವಿಚಾರಿಸುವವರೇ ಇಲ್ಲ. ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಜನ ಸಂದಣಿ ದಾಡಿ ಲಸಿಕೆ ಪಡೆಯಲು ಒಂದು ದಿನ ಬೇಕು. ಆ ದಿನ ರಜೆ ಹಾಕಿದ್ರೆ ಒಂದು ದಿನ ಕೈಗೆ ಹಣ ಸಿಗಲ್ಲ. ಆ ದಿನ ಉಪವಾಸ ಮಲಗಬೇಕಾಗುತ್ತದೆ ಎಂಬ ಆತಂಕ ಅಲೆಮಾರಿಗಳಲ್ಲಿದೆ. ಅಸಹಾಯಕ ಸ್ಥಿತಿಯಲ್ಲಿ ಮಂಡ್ಯದಲ್ಲಿ ಬೀಡುಬಿಟ್ಟ ಅಲೆಮಾರಿಗಳಿದ್ದಾರೆ.

ಸುಮಾರು 15 ಆಟೋಗಳ ಮೂಲಕ ಮಂಡ್ಯದಲ್ಲಿ 50ಕ್ಕೂ ಹೆಚ್ಚು ಅಲೆಮಾರಿಗಳು ಬೀಡುಬಿಟ್ಟಿದ್ದಾರೆ. ಇವರಿಗೆ ಕೊವಿಡ್ ಲಸಿಕೆಯ ಬಗ್ಗೆ ಅರಿವು ಇಲ್ಲ. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಗೊತ್ತಿಲ್ಲ. ಇವರನ್ನು ನಿರ್ಲಕ್ಷ್ಯಿಸಿದ್ರೆ ಇವರಿಂದಲೂ ಕೊರೊನಾ ಹರಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಗಳು ಇಂತಹ ಅಲೆಮಾರಿಗಳನ್ನ ಗುರುತಿಸಿ ಲಸಿಕೆ ನೀಡಬೇಕಿದೆ.


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ