Breaking News

‘ಮುಸ್ಲಿಂ ನಾಯಕ ವೀಕ್ ಆಗ್ಲಿ ಅಂತ ರೇಡ್’ ED ದಾಳಿ ಬಗ್ಗೆ ಸಿದ್ದರಾಮಯ್ಯ ಆಪ್ತನ ಆಕ್ರೋಶ

Spread the love

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ರೇಡ್​​ಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಬಳಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಮಾಜಿ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಆಗಮಿಸಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಶೋಕ್ ಪಟ್ಟಣ್.. ಐಎಂಎ ಪ್ರಕರಣ ನಡೆದು ತುಂಬಾ ದಿನ ಆಯ್ತು.. ಈ ದಾಳಿ ರಾಜಕೀಯ ಪ್ರೇರಿತ ಅಂತ ಗೊತ್ತಾಗುತ್ತಿದೆ.. ತಪ್ಪಿದ್ರೆ ಆವತ್ತೇ ಅರೆಸ್ಟ್ ಮಾಡ್ತಾ ಇದ್ರು.. ಇದು ರಾಜಕೀಯ ಪ್ರೇರಿತ ಎಂದಿದ್ದಾರೆ.

ಅಶೋಕ್ ಪಟ್ಟಣ್, ಮಾಜಿ ಶಾಸಕ

ಅಲ್ಲದೇ ದಿಲ್ಲಿಯಿಂದ ಬಂದು ರೈಡ್ ಮಾಡಿದ್ದಾರೆ.. ಮುಸ್ಲಿಂ ನಾಯಕ ವೀಕ್ ಆಗ್ತಾರೆ ಅಂತ ರೈಡ್ ನಡೆದಿದೆ. ಸ್ನೇಹಿತನಾದ ಕಾರಣ ಇಂತ ಸಮಯದಲ್ಲಿ ಭೇಟಿ ಮಾಡೋದು ಒಳಿತು ಎಂದು ಬಂದೆ.. ಜಮೀರ್ ವಿಶ್ರಾಂತಿ ಪಡೆಯುತ್ತಿದ್ದಾರೆ.. ಎಂದು ಜಮೀರ್ ಅವರನ್ನ ಭೇಟಿಯಾಗದೇ ಅಶೋಕ್ ಪಟ್ಟಣ್ ವಾಪಸ್ಸಾಗಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ