ಗದಗ: ಲಕ್ಕುಂಡಿಯಲ್ಲಿ 6ನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಉತ್ಖನನ ವೇಳೆ ಹಸಿರು ಬಣ್ಣದ ನಾಗರಶಿಲೆ, ಸುಟ್ಟ ಮಣ್ಣಿನ ಬಿಲ್ಲೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಹಸಿರು ಬಣ್ಣದಲ್ಲಿ ನಾಗರ ಶಿಲೆ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಈ ಶಿಲೆ ಪತ್ತೆಯಾಗಿದ್ದು ನಿದಿ ಇದೆ ಎಂಬ ಸೂಚನೆ ಎನ್ನಲಾಗುತ್ತಿದೆ.
ಉತ್ಖನನ ಜಾಗದ 01ನೇ ಬ್ಲಾಕ್ ನಲ್ಲಿ ಆರೇಳು ಚಿಕ್ಕ ಚಿಕ್ಕ ಮೂಳೆಯ ತುಂಡುಗಳು ಪತ್ತೆಯಾಗಿವೆ. ಸಿಕ್ಕ ಆ ಮೂಳೆಯ ತುಂಡನ್ನು ಚಿಕ್ಕ ಪ್ಲಾಸ್ಟಿಕ್ ಪ್ಯಾಕೇಟ್ನಲ್ಲಿ ಸೀಲ್ ಮಾಡಿ ಅಧಿಕಾರಿಗಳು ತೆಗೆದಿಟ್ಟಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು, ಮೇಲ್ವಿಚಾರಕರು ಇದರ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮೂಳೆ ಮಾನವರದ್ದಾ? ಪ್ರಾಣಿಗಳದ್ದಾ? ಅಥವಾ ಯಾವುದಾದರೂ ಪಕ್ಷಿಯದ್ದಾ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಜ.20 ರಂದು ಶಿವಲಿಂಗದ ಪಾಣಿಪೀಠ ಪೂರ್ಣ ಭಾಗ ಹೊರತೆಗೆಯಲಾಗಿತ್ತು. ಜೊತೆಗೆ ದೊಡ್ಡ ಮಡಿಕೆಯ ಒಂದು ಭಾಗ ಪತ್ತೆಯಾಗಿತ್ತು. ಇವತ್ತು ಈಗಾಗಲೇ ಸುಮಾರು 6 ಅಡಿಯಷ್ಟು ಆಳಕ್ಕೆ ಅಗೆಯಲಾಗಿದೆ. ಭೂಗರ್ಭ ಅಗೆದಷ್ಟು ಅನೇಕ ಅವಶೇಷಗಳು ಪತ್ತೆಯಾಗುತ್ತಿವೆ. ಈ ಮೂಲಕ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ
Laxmi News 24×7