ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಮಹಿಳಾ ದಿನಾಚರಣೆ ಹಾಗೂ ಕಾನೂನು ಮತ್ತು ಆಧ್ಯಾತ್ಮ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದು ನನಗೆ ಅತ್ಯಂತ ಸಂತಸ ಮತ್ತು ತೃಪ್ತಿ ನೀಡಿದ ಅನುಭವ ವಾಗಿದೆ.
ಕಾನೂನು ಎನ್ನುವುದು ಸಮಾಜದ ಶಿಸ್ತಿನ ಕವಚವಾದರೆ, ಆಧ್ಯಾತ್ಮ ಎನ್ನುವುದು ಬದುಕಿನ ಅಂತರಂಗದ ಬೆಳಕು. ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ್ದು ಕಾರ್ಯಕ್ರಮದ ವಿಶಿಷ್ಟತೆಯಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಎ. ಎಸ್. ಪಾಶ್ಚಾಪುರೆ ಅವರು, ಅಧ್ಯಕ್ಷತೆ ವಹಿಸಿದ್ದ ಶ್ರೀ ತಾರಕೇಶ್ವರಗೌಡ ಎಸ್. ಪಾಟೀಲ ಅವರು ಹಾಗೂ ಇತರ ಗಣ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶ ಲಭಿಸಿದ್ದು ನನಗೆ ಸಂತಸ ತಂದಿದೆ.
ಮಹಿಳೆಯರ ಸಬಲೀಕರಣ ಕೇವಲ ಕಾನೂನಿನ ಹಕ್ಕುಗಳಿಂದ ಮಾತ್ರವಲ್ಲದೆ, ಅಧ್ಯಾತ್ಮಿಕ ಬಲ ಮತ್ತು ಬೌದ್ಧಿಕ ಜಾಗೃತಿಯಿಂದಲೂ ಸಾಧ್ಯ ಎಂಬ ನನ್ನ ಚಿಂತನೆಗಳಿಗೆ ಅಲ್ಲಿನ ಪ್ರೇಕ್ಷಕರಿಂದ ಲಭಿಸಿದ ಪ್ರತಿಕ್ರಿಯೆ ಮನದುಂಬುವಂತಿತ್ತು.
ಈ ಸುಂದರ ಕಾರ್ಯಕ್ರಮವನ್ನು ಆಯೋಜಿಸಿ ನನಗೆ ಅವಕಾಶ ನೀಡಿದ ಚಿಕ್ಕೋಡಿಯ ನ್ಯಾಯವಾದಿಗಳ ಸಂಘದ ಸರ್ವ ಸದಸ್ಯರಿಗೂ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
Laxmi News 24×7