Breaking News

ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ

Spread the love

 

ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ ಇಲ್ಲದೆ ಪ್ರತಿ ಸಮಾಜದವರಿಗೆ ಕೆ,ಎಲ್,ಇ,ಶಿಕ್ಷಣ ಸಂಸ್ಥೆ ಶಿಕ್ಷಣ ಕೊಂಡುವಂತಾಗಿದೆ.
ಅದಲ್ಲದೆ ಬೇರೆ ಸಮಾಜದವರಕ್ಕಿಂತ ಲಿಂಗಾಯತ ಸಮಾಜದಲ್ಲಿ ಬಹಳ ಬಡವರಿದ್ದಾರೆ, ಸನ್ಮಾನ್ಯ ಯಡಿಯೂರಪ್ಪನವರು ಅಂತವರಿಗ ನಮ್ಮ ಸಮಾಜದವರನ್ನು ಹಿಂದೂಳಿದ ಪಟ್ಟಿಗೆ ಸೇರಿಸಿದರೆ ಅವರನ್ನು ನಾವೆಲ್ಲರೂ ಪೂಜಿಸುತ್ತೇವೆಂದರು.

ಬೆಳಗಾವಿಯಲ್ಲಿ ವೀರಶೈವ ಲಿಂಗಾಯತರ ವಿದ್ಯಾ್ಥಿಗಳಿಗೆ ನೀಡಿದ ಹಾಸ್ಟೇಲ ಜಾಗದ ದರ ಕಡಿಮೆ ಮಾಡಲು ಯಡಿಯೂರಪ್ಪನವರ ಪುತ್ರಿ ವೇದಿಕೆ ಮೇಲೆ ಆಶಿನರಾದಂತ ಅರೂಣಾದೇವಿಗೆ ವಿನಂತಿಸಿದರು.

ನಮ್ಮ ಸಮಾಜಕ್ಕೆ ಶಕ್ತಿ ಬೇಕಾಗಿದೆ, ಶಕ್ತಿ ಇಲ್ಲದೆ ಸಮಾಜದಿಂದ ಎನೂ ಮಾಡಲು ಸಾದ್ಯವಿಲ್ಲ ಎಂದರು.ನಮ್ಮಲ್ಲಿ ದಾನಿಗಳಿದ್ದಾರೆ ಆದರೆ ಮಾರ್ಗದರ್ಶನವಿಲ್ಲದ ಕಾರಣ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಹೆಣ್ಣು ಕಲಿಯುವುದು ಎಲ್ಲರ ಉದ್ದಾರಕ್ಕಾಗಿ ಗಂಡು ಕಲಿಯುವುದು ಸ್ವಾರ್ಥಕ್ಕಾಗಿ ಎಂದು ಹೇಳುತ್ತಾ ಎಲ್ಲರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ಗದಗ ಬ್ರಹ್ಮಮಠದ ಜಗದ್ಗುರು ಶ್ರೀಸಾದಶಿವಾನಂದ ಭಾರತಿ ಸ್ವಾಮಿಗಳು ಸಾನಿದ್ಯ ವಹಿಸಿದ್ದರು , ಮಹಿಳಾ ಘಟಕದ ರಾಜ್ಯಾದಕ್ಷರಾದ ಶರಣೆ ಅರುಣಾದೇವಿ,ಬೆಳಗಾವಿ ಜಿಲ್ಲಾ ಯುವ ಘಟಕದ ಅದ್ಯಕ್ಷರಾದ ಚೇತನ ಅಂಗಡಿ,ಜಿಲ್ಲಾ ಘಟಕ್ ಅದ್ಯಕ್ಷೆ ರತ್ನಪ್ರಭಾ ಬೆಲ್ಲದ,ಮಹಿಳಾ ಜಿಲ್ಲಾ ಘಟಕದ ಅದ್ಯಕ್ಷರಾದ ಶರಣೆ ಜ್ಯೋತಿ ಭಾವಿಕಟ್ಟಿ, ತಾಲೂಕ ಮಹಾಸಭಾದ ಅದ್ಯಕ್ಷರಾದ ಸೋಮಶೇಖರ್ ಮಗದುಮ್ಮ, ತಾಲೂಕಾ ಗೌರವಾದಕ್ಷ ರಾಜು ಮುನವಳ್ಳಿ,ಚಂದ್ರಶೇಖರ ಕೊಣ್ಣೂರ, ನಂದಾ ಗಣಾಚಾರಿ.ಮಹಾಂತೇಶ ತಾಂವಶಿ,ರಾಜು ಮೂಡಲಗಿ,ರಮೇಶ ಹಿರೆಮಠ,ಬಸವರಾಜ ಹುಳ್ಳೇರ,ವಿ,ಎಸ್,ಮಗದುಮ್, ಪ್ರಕಾಶ ಬಾಗೆವಾಡಿ ಹಾಗೂ ಇನ್ನೂಳಿದ ಗಣ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ