Breaking News

ಸತೀಶ್ ಜಾರಕಿಹೋಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳೋದು ತಪ್ಪಲ್ಲ: ಅಶೋಕ್ ಪಟ್ಟಣ್

Spread the love

ಬೆಂಗಳೂರು: ಮೊದಲ ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ ಸಚಿವ ಸ್ಥಾನ ಕೊಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್  ತಿಳಿಸಿದ್ದಾರೆ.

ಮೊದಲ ಬಾರಿ ಗೆದ್ದ ಕಾಂಗ್ರೆಸ್ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಬಾರಿ ಗೆದ್ದಿರೋರು ಮಂತ್ರಿ ಸ್ಥಾನ ಕೇಳೋದು ತಪ್ಪೇನು ಅಲ್ಲ. ಇದರಲ್ಲಿ ಯಾವುದೇ ಗೊಂದಲ, ಬಂಡಾಯ ಇಲ್ಲ. ಎಲ್ಲರಿಗೂ ಮಂತ್ರಿ ಆಗೋಕೆ ಆಸೆ ಇದ್ದೇ ಇರುತ್ತದೆ ಎಂದರು.

ನಮ್ಮಲ್ಲಿ 135 ಜನ ಗೆದ್ದಿದ್ದೇವೆ. ನಮ್ಮಲ್ಲಿ ಮೊದಲಿಂದ ಸೀನಿಯರ್‌ಗಳಿಗೆ ಮಂತ್ರಿ ಸ್ಥಾನ ಕೊಡಬೇಕು ಅಂತ ಪದ್ಧತಿ ಇದೆ. ಈ ಬಾರಿ ಗೆದ್ದಿರೋರು ಕೇಳೋದು ತಪ್ಪಲ್ಲ. ಬುದ್ಧಿವಂತ, ಸಮರ್ಥರು ಇದ್ದಾರೆ. ಅವರು ಕೇಳೋದು ತಪ್ಪಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಮಾಡಲಿ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಬೇರೆಯವರಿಗೆ ಕೊಡಿ ಅಂತ ಸತೀಶ್ ಜಾರಕಿಹೊಳಿಯಿಂದ  ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳೋದು ತಪ್ಪಲ್ಲ. ಅವರಿಗೆ ಅಹಿಂದ ಮುನ್ನಡೆಸುವ ಕೆಪಾಸಿಟಿ ಇದೆ, ಖರ್ಗೆ-ಸತೀಶ್ ಜಾರಕಿಹೊಳಿ ಮಾತಾಡಿರೋದು ನಮಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿಎಂಗೂ ಕ್ಲೈಮ್ ಮಾಡ್ತಾರೆ, ಅಧ್ಯಕ್ಷರಿಗೂ ಕ್ಲೈಮ್ ಮಾಡ್ತಾರೆ. ಕ್ಲೈಮ್ ಮಾಡೋರು ಇದ್ದಾರೆ. ಅದರ ಬಗ್ಗೆ ನಮಗೇನು ಗೊತ್ತಿಲ್ಲ. ಅಧ್ಯಕ್ಷರನ್ನಾಗಿ ಮಾಡಿ ಅಂತ ಜಾರಕಿಹೋಳಿ ಖರ್ಗೆ ಕೇಳಿರೋದು ನನಗೆ ಗೊತ್ತಿಲ್ಲ. ಅವರು ಒನ್ ಟು ಒನ್ ಮಾತಾಡಿದ್ದಾರೆ ನಮಗೇನು ಗೊತ್ತಿಲ್ಲ. ಸತೀಶ್ ಜಾರಕಿಹೋಳಿ ನಾನು ಭೇಟಿಯಾಗಿಲ್ಲ. ಹೀಗಾಗಿ ಗೊತ್ತಿಲ್ಲ ಎಂದರು.

ಅಹಿಂದ ಲೀಡ್ ಮಾಡೋಕೆ ಸತೀಶ್‌ಗೆ ಕೆಪಾಸಿಟಿ ಇಲ್ಲ ಅಂತ ಹೇಳಿದ್ದು ಯಾರು? ಕ್ಲೈಮ್ ಮಾಡೋರು ಮಾಡೇ ಮಾಡುತ್ತಾರೆ. ಪರಮೇಶ್ವರ್ ಕೇಳುತ್ತಿದ್ದಾರೆ. ಅಧ್ಯಕ್ಷ ಸ್ಥಾನ, ಸಿಎಂ ಸ್ಥಾನ ಎಲ್ಲವನ್ನು ಬಹಳಷ್ಟು ಜನ ಕೇಳುತ್ತಾರೆ. ಅಹಿಂದವನ್ನ ಸತೀಶ್ ಜಾರಕಿಹೊಳಿ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳೋದು ತಪ್ಪಲ್ಲ ಎಂದು ತಿಳಿಸಿದರು.

ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಪರಿಸ್ಥಿತಿ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡಿದ್ರೆ ಸಿದ್ದರಾಮಯ್ಯ ಅವರೇ 10 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಸ್ಥಾನ ಹಂಚಿಕೆ ಬಗ್ಗೆ ಮೊದಲಿಂದಲೂ ಕೇಳುತ್ತಿದ್ದಾರೆ. ಹೈಕಮಾಂಡ್ ಏನೇ ನಿರ್ಧಾರ ಮಾಡಿದ್ರು ಅದೇ ಫೈನಲ್. ಸಿದ್ದರಾಮಯ್ಯ ಕೂಡಾ ಹೈಕಮಾಂಡ್ ನಾಳೆ ಸ್ಥಾನ ಬಿಡು ಅಂತ ಹೇಳಿದ್ರೆ ಬಿಡೋದಾಗಿ ಹೇಳಿದ್ದಾರೆ. ಪದೇ ಪದೇ ಅದರ ಬಗ್ಗೆ ಮಾತಾಡೋದು ಬೇಡ ಎಂದರು.

ಹೈಕಮಾಂಡ್ ಮನಸು ಮಾಡಿದ್ರೆ ಸಿದ್ದರಾಮಯ್ಯ 20 ವರ್ಷ ಸಿಎಂ ಆಗಿ ಇರಬಹುದು. 5 ವರ್ಷ ಅಲ್ಲ ಹೈಕಮಾಂಡ್ ನಿರ್ಧಾರ ಮಾಡಿದ್ರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ 10 ವರ್ಷ ಇರಬಹುದು. ಸಿಎಂ ಬದಲಾವಣೆ ಆಗೋ ಪರಿಸ್ಥಿತಿ ಏನು ಕಾಣಿಸುತ್ತಿಲ್ಲ. ಸರ್ಕಾರ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಆದರು ಹೈಕಮಾಂಡ್ ಮುಂದಿನ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.


Spread the love

About Laxminews 24x7

Check Also

ಖಾಸಗಿ ಇಂಧನ‌ ಕಂಪನಿಗಳ‌ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಆಹಾರ ಸಚಿವ:- ಮುನಿಯಪ್ಪ.

Spread the loveವಸಂತನಗರ: ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ‌ ರವರು ಇಂದು ವಸಂತನಗರದ ಆಹಾರ ಭವನದಲ್ಲಿ ಖಾಸಗಿ ಇಂಧನ ಕಂಪನಿಗಳ ಮುಖ್ಯಸ್ಥರೊಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ