Breaking News

ಈತ ವೃತ್ತಿಯಲ್ಲಿ ಇಂಜಿನಿಯರ್​​.. ಮಾಡಿದ್ದು ಬ್ಯಾಂಕ್​​ ರಾಬ್ರಿ.. ಈ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?

Spread the love

ಅವನೊಬ್ಬ ಸ್ವಾಫ್ಟ್​ವೇರ್ ಇಂಜಿನಿಯರ್. ಕೈ ತುಂಬಾ ಸಂಬಳ ಬರುವ ಕೆಲಸ ಅವನಿಗಿತ್ತು. ಆದ್ರೆ, ಅವನಿಗೆ ಬರ್ತಿದ್ದ ಸಂಬಳ ಸಾಕಾಗ್ತಿರಲಿಲ್ಲ ಅನ್ಸುತ್ತೆ. ವೇಗವಾಗಿ ದುಡ್ಡ ಮಾಡಬೇಕೆಂಬ ಆಸೆ ಇದ್ದವನು ಬೇಡದ ಆದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೊರಟಿದ್ದ. ಅದಕ್ಕೆ ಅಂತಾನೇ, ತನ್ನ ತಾಯಿಯ ಚಿನ್ನಾಭರಣ ಅಡಿವಿಟ್ಟ.. ಬ್ಯಾಂಕ್​ ಸಾಲ ಮಾಡಿ ಆನ್​ಲೈನಲ್ಲಿ ಟ್ರೇಡಿಂಗ್ ಶುರು ಮಾಡಿದ್ದ. ಬಟ್​ ಏನೋ ಮಾಡಲು ಹೋಗಿ ಏನೋ ಆಯ್ತು ಅಂತಾರಲ್ಲ, ಹಂಗಾಗಿದೆ ಅವನ ಕಥೆ.. ದುಡ್ಡು ಮಾಡೋಕೆ ಹೋಗಿ ಸಾಲದಲ್ಲಿ ತಗ್ಲಾಕ್ಕೊಂಡವನು, ಕೊನೆಗೆ ಕಳ್ಳನಾಗಿ ಹೋಗಿದ್ದಾನೆ.

ಜನವರಿ 14ನೇ ತಾರೀಖು ಎಲ್ಲರೂ ಸಂಕ್ರಾತಿ ಹಬ್ಬದ ಸಡಗರದಲ್ಲಿದ್ರೆ, ಇದೊಂದು ಬ್ಯಾಂಕ್​ ಸಿಬ್ಬಂದಿ ಮಾತ್ರ ದಂಗಾಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವುದೊರಳಗೆ ಬೆಂಗಳೂರಿನ ಮಡಿವಾಳದ ಎಸ್​.ಬಿ.ಐ ಬ್ಯಾಂಕ್​ನಲ್ಲಿ ಹಣ, ಚಿನ್ನಾಭರಣ ಮಂಗ ಮಾಯವಾಗಿತ್ತು. ಹಬ್ಬದ ದಿನ ಇದೇನ್​ ಗ್ರಹಚಾರ ಅಂತಾ ತಲೆಮೇಲೆ ಕೈ ಇಟ್ಟು ಕುಳಿತ ಬ್ಯಾಂಕ್​ ಸಿಬ್ಬಂದಿ ಕಡೆಗೆ ಮಡಿವಾಳ ಪೊಲೀಸರಿಗೆ ವಿಷ್ಯಾ ಮುಟ್ಟಿಸಿದ್ರು. ಅದಾದ್ಮೇಲೆ ನೋಡಿ ಅಸಲಿ ಆಟ ಶುರುವಾಗಿದ್ದು.

ಇಲ್ನೋಡಿ ಅದ್ಹೇಗೆ ಕಳ್ಳ ಬೆಕ್ಕು ಬ್ಯಾಂಕ್​ಗೆ ಎಂಟ್ರಿಯಾಗಿ, ಕೈ ಚಳಕ ತೋರಿಸ್ತಿದೆ ಅಂತಾ. ನೋಡ ನೋಡ್ತಿದ್ದಂಗೆ ಅಲ್ಲಿದ್ದ ದುಡ್ಡು, ಚಿನ್ನಾಭರಣಗಳೆಲ್ಲಾ ಗಾಯಬ್.. ಬ್ಯಾಂಕ್​ ಸಿಬ್ಬಂದಿಗೇ ಧಮ್ಕಿ ಹಾಕಿ ಕೂಡ ಚಿನ್ನಾಭರಣ ದೋಚ್ತಾನೆ ಖತರ್ನಾಕ್​. ಹಬ್ಬದ ದಿನ ಹೀಗೆ ಬ್ಯಾಂಕ್ ರಾಬರಿಗಿಳಿದಿದ್ದ ಪ್ರಳಯಾಂತಕ ಯಾರಿರಬಹುದು ಅನ್ನೋದು ನಿಮ್ಮೆಲ್ಲರ ಪ್ರಶ್ನೆ ಅಲ್ವಾ? ಇಲ್ಲೊಂದು ಫೋಟೋ ತೋರಿಸ್ತೀವಿ ನೋಡ್ಕೋಬಿಡಿ..


Spread the love

About Laxminews 24x7

Check Also

ಸಚಿವ ತಿಮ್ಮಾಪುರ ವಜಾ ಮಾಡದಿದ್ದರೆ ಸಿಎಂಗೆ 85% ಕಮಿಷನ್ ಹೋಗಿದೆ ಎಂದರ್ಥ: ಆರ್. ಅಶೋಕ್

Spread the loveಬೆಂಗಳೂರು: ಸಿದ್ದರಾಮಯ್ಯನವರ ನಿದ್ದೆ ಸರ್ಕಾರ ಇದು. ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ವಜಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ