Breaking News

Uncategorized

ಕರ್ನಾಟಕ ಕಾಂಗ್ರೆಸ್’ನಲ್ಲಿ ಮಹತ್ವದ ಬದಲಾವಣೆ: ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು: ಮುಂಬರುವಂತ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಮೇಜರ್ ಸರ್ಜರಿ ಎನ್ನುವಂತೆ ಕರ್ನಾಟಕ ಕಾಂಗ್ರೆಸ್ ನಿಂದ ( Karnataka Congress ) ಮಹತ್ವದ ಬದಲಾವಣೆ ಮಾಡಲಾಗಿದೆ. ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದೆ.     ಈ ಸಂಬಂಧ ಕಾಂಗ್ರೆಸ್ ಪಕ್ಷದ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಜಾರಿಗೆ ಬರುವಂತೆ ಕೆಪಿಸಿಸಿಯಿಂದ ಈ ಕೆಳಕಂಡ ಐದು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು …

Read More »

‘ಸ್ವಯಂ ನಿವೃತ್ತಿ ನಿಯಮ’ ಸರಳೀಕರಿಸಿದ ಕೇಂದ್ರ ಸರ್ಕಾರ ; ಹೊಸ ನಿಯಮಗಳು ಇಂತಿವೆ

ನವದೆಹಲಿ : ಅಖಿಲ ಭಾರತ ಸೇವಾ (AIS) ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಸರಳೀಕರಿಸುತ್ತಿದೆ. ಆದಾಗ್ಯೂ, ಈ ಬಗ್ಗೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನ ಹೊರಡಿಸಲಾಗಿದೆ. ಕೆಲವು ಸಮಯದ ಹಿಂದೆ ಹೊರಡಿಸಿದ ನಿರ್ದೇಶನಗಳಲ್ಲಿ, ಡಿಒಪಿಟಿ ಸ್ವಯಂ ನಿವೃತ್ತಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಕನಿಷ್ಠ 90 ದಿನಗಳ ಮುಂಚಿತವಾಗಿ ಲಿಖಿತ ಸಂವಹನ ನೀಡಬೇಕು ಎಂದು ಹೇಳಿದೆ. ಇತರ ಎಲ್ಲಾ ಷರತ್ತುಗಳನ್ನ ಪೂರೈಸಿದರೆ, ಅಧಿಕಾರಿಯು ಮೂರು ತಿಂಗಳ ನೋಟಿಸ್’ನ ಕೊನೆಯ ದಿನಾಂಕದಿಂದ ನಿವೃತ್ತರಾಗಬಹುದು. …

Read More »

ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ಅಗತ್ಯ

ಮೂಡಲಗಿ: ಮಕ್ಕಳ ಭವಿಷ್ಯದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮೊದಲಿನ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯನ್ನು ತರಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲಿಸಬೇಕು ಎನ್ನುವ ಉದ್ದೇಶದಿಂದ ಪ್ರಾಯೋಗಿಕವಾಗಿ ಐದು ಸ್ಮಾರ್ಟ್‌ ಕ್ಲಾಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.   ಪಟ್ಟಣದ ಕೃಷ್ಣಪ್ಪ ಹ.ಸೋನವಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಬೇಕಾದ …

Read More »

ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರ ಜೊತೆಗೆ ಹಿರಿಯ ನಾಗರಿಕರೊಬ್ಬರು ವಾಗ್ವಾದ

ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರ ಜೊತೆಗೆ ಹಿರಿಯ ನಾಗರಿಕರೊಬ್ಬರು ವಾಗ್ವಾದ ಮಾಡಿರುವ ಘಟನೆ ನಡೆದಿದೆ. ಅಲ್ಲದೇ ಟ್ರಾಫಿಕ್ ಪೊಲೀಸರ ಕಿರಿಕಿರಿಯಿಂದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೌದು ಬೆಳಗಾವಿಯ ಆರ್‍ಟಿಓ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಹೀಗೆ ಬಿದ್ದಿರುವ ಬೈಕ್‍ನ್ನು ನಿಲ್ಲಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೈಕ್ ಓಡಿಸುತ್ತಿದ್ದವರ ನಿಯಂತ್ರಣ ತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಟ್ರಾಫಿಕ್ …

Read More »

ಬಾಡಿ ಫಿಟ್ ಇದ್ರೆ ನೀವೂ ಪೊಲೀಸ್ ಆಗಬಹುದು: ಡಿಸಿಪಿ ಸ್ನೇಹಾ

ಪೊಲೀಸ್ ಆಗಬೇಕಾದರೆ ದೈಹಿಕವಾಗಿ ಫಿಟ್ ಆಗಿರಬೇಕು. ಚಟುವಟಿಕೆಗಳ ಮೂಲಕ ನಮ್ಮ ದೇಹವನ್ನು ಚನ್ನಾಗಿ ಇಟ್ಟುಕೊಳ್ಳಬೇಕು. ದೇಹ ಚನ್ನಾಗಿದ್ದರೆ ಮನಸ್ಸು ಕೂಡ ಒಳ್ಳೆಯ ರೀತಿ ಕೆಲಸ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಡಿಸಿಪಿ ಪಿ.ವಿ.ಸ್ನೇಹಾ ಅವರು ಸಲಹೆ ನೀಡಿದರು. ಗುರುವಾರ ಬೆಳಗಾವಿಯ ಸರ್ದಾರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಪಿ ಪಿ.ವಿ.ಸ್ನೇಹಾ ಅವರುಶನಿವಾರ ನಿಮಗೆ ಕಾರ್ಯಕ್ರಮ ಶುರುವಾಗಿದೆ. ಈ ವೇಳೆ ಸಂಪನ್ಮೂಲ …

Read More »

ಪತ್ರ ವಿತರಿಸಲು ಓಡಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಶ್ರೀನಗರ ಸ್ಲಂ ನಿವಾಸಿಗಳಿಂದ ಧರಣಿ

ನಾಲ್ಕು ವರ್ಷಗಳಿಂದ ಮನೆಗಳ ಹಕ್ಕು ಪತ್ರ ವಿತರಿಸಲು ಓಡಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಹೀಗೆ ಪ್ರತಿಭಟನೆ ಮಾಡುತ್ತಿರುವವರು ಶ್ರೀನಗರ ಕೊಳಗೇರಿ ಪ್ರದೇಶದ ಸ್ಲಂ ಬೋರ್ಡ ನಿವಾಸಿಗಳು. 4 ವರ್ಷದ ಹಿಂದೆ ಸರ್ಕಾರದ ಮನೆಗಳಿಗಾಗಿ ಇವರೆಲ್ಲಾ ದುಡ್ಡು ತುಂಬಿದ್ದರು. ಆದರೆ ಇದುವರೆಗೂ ಇವರಿಗೆ ಮನೆ ಹಕ್ಕು ಪತ್ರ ನೀಡುತ್ತಿಲ್ಲ. ಇಂದು ಬನ್ನಿ, ನಾಳೆ ಬನ್ನಿ ಎಂದು ವಿನಾಕಾರಣ ಅಧಿಕಾರಿಗಳು …

Read More »

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್  ಧಾರವಾಡದಲ್ಲಿ  ಯಾವನೋ ಧಾರವಾಡಕ್ಕೆ ಬಾರೋ ಎಂದು ಸವಾಲ್ ಹಾಕಿದ್ದ. ಇನ್ನು ಕೆಲ ದಿನಗಳಲ್ಲಿ ಬರುತ್ತೆನೆ‌. ಅಗರ್ ತುಮಾರೆ ಪಾಸ್ ದಮ್ ರೆಹತೋ ಆರೆ ಚಿ…..ಕೆ ಎಂದು ಎಕವಚನದಲ್ಲಿ ಟಾಂಗ್ ಕೊಟ್ಟರು. ಮುಂದುವರೆದು ನಾನು ಧಾರವಾಡಕ್ಕೆ ಬರುತ್ತೆನೆ ನಾನು ಚಾಲೇಂಜ್ ತಗೊಂಡು ಬಂದೆನಿ, ನನಗೆ ಯಾರ ಚಾಲೆಂಜ್ ಹಾಕ್ತಾರೆ ಅವರ ಇದ್ದಲ್ಲೆ ಹೋಗಿ ಸಮಾವೇಶ ಮಾಡುತ್ತೆನೆ. . ಇಲ್ಲಿ ಒಬ್ಬ ಮಾತಾಡಿದ್ದ ಎಂದು …

Read More »

ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಅವರ ಭವಿಷ್ಯ ಇಲ್ಲೇ ಇದೆ: ಯತ್ನಾಳ

ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಅವರ ಭವಿಷ್ಯ ಇಲ್ಲೇ ಇದೆ ಅವರು ಆದಷ್ಟು ಬೇಗ ಮಂತ್ರಿಯಾಗುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಬಿಟ್ಟರೆ ಜೆಡಿಎಸ್ ನಲ್ಲಿ ಏನು ಇದೆ ಸಚಿವ ಸಂಪುಟ ವಿಸ್ತರಣೆ ಆದರೆ ಮೊದಲು ಹೆಸರು ಜಾರಕಿಹೊಳಿ ಅವರದ್ದು ಇದೆ ಎಂದರು.  

Read More »

ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ವಿಧಾನಮಂಡಳ ಚಳಿಗಾಲ ಅಧಿವೇಶನ

ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಸತಿ, ಊಟೋಪಾಹಾರ, ಸಾರಿಗೆ, ವೈದ್ಯಕೀಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.23) ನಡೆದ ವಿವಿಧ ಸಮಿತಿಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿವೇಶನಕ್ಕೆ ಆಗಮಿಸುವ ಸಚಿವರು, …

Read More »

6,000 ಉದ್ಯೋಗಗಳ ಕಡಿತಕ್ಕೆ ಮುಂದಾದ ಎಚ್‌ಪಿ

ನವದೆಹಲಿ: ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳ ಕಡಿತಕ್ಕೆ ಹೆವ್ಲೆಟ್‌ ಪ್ಯಾಕರ್ಡ್‌(ಎಚ್‌ಪಿ) ಕಂಪನಿ ಮುಂದಾಗಿದೆ. ಪ್ರಸ್ತುತ ಕಂಪನಿಯಲ್ಲಿ ಸುಮಾರು 61,000 ಉದ್ಯೋಗಿಗಳಿದ್ದು, ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 2025ರ ಆರ್ಥಿಕ ವರ್ಷ ಮುಗಿಯುವವರೆಗೆ ಶೇ.10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಉದ್ಯೋಗ ಕಡಿತದ ಜತೆಗೆ ತಂತ್ರಜ್ಞಾನ ವೆಚ್ಚವನ್ನು ಕೂಡ ಕಡಿತಗೊಳಿಸಲಾಗುವುದು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಎಚ್‌ಪಿ ಸಿಇಒ …

Read More »