ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೈದಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಫೆಬ್ರವರಿ 19 ರಿಂದ ಆರಂಭವಾಗುವ ದುಬೈ ಟೆನಿಸ್ ಚಾಂಪಿಯನ್ಶಿಪ್ ಬಳಿಕ ಅವರು ಟೆನಿಸ್ಗೆ ಗುಡ್ಬೈ ಹೇಳಲಿದ್ದಾರೆ. ಫಿಟ್ನೆಸ್ ಸಮಸ್ಯೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಅವರು ಟೆನಿಸ್ನಿಂದ ದೂರವುಳಿಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಪರ್ಲ್ ಸಿಟಿಯ 36 ವರ್ಷದ ಮೂಗುತಿ ಸುಂದರಿ ಗಾಯದ ಸಮಸ್ಯೆಯಿಂದಾಗಿ ಕಳೆದ ಯುಎಸ್ ಒಪನ್ನಲ್ಲಿ ಭಾಗವಹಿಸಿರಲಿಲ್ಲ. ಅದಾದ …
Read More »ಕಾಸರಗೋಡು – ಆನ್ಲೈನ್ ನಲ್ಲಿ ತರಿಸಿದ ಊಟ ತಿಂದು ವಿಧ್ಯಾರ್ಥಿನಿ ಸಾವು.!!
ಮಂಗಳೂರು ಜನವರಿ 07: ಹೊಸ ವರ್ಷದ ಹಿಂದಿನ ದಿನ ಆನ್ಲೈನ್ ಮೂಲಕ ತರಿಸಿದ ಊಟ ತಿಂದು 19 ವರ್ಷ ವಯಸ್ಸಿನ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ. ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ( 19) ಮೃತಪಟ್ಟ ವಿದ್ಯಾರ್ಥಿನಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ .ಕಾಂ ವಿದ್ಯಾರ್ಥಿನಿಯಾಗಿದ್ದಳು . ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, …
Read More »ಗಣರಾಜೋತ್ಸವ ಪರೇಡ್ನಲ್ಲಿ ಈ ಬಾರಿ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗುತ್ತದೆ; ಸಿಎಂ ಬೊಮ್ಮಾಯಿ ವಿಶ್ವಾಸ
ಮೈಸೂರು: ಗಣರಾಜೋತ್ಸವ ಪರೇಡ್ನಲ್ಲಿ ಈ ಬಾರಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕರ್ನಾಟಕ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಪರೇಡ್ ಗೆ ನಿರಾಕರಣೆ ವಿಚಾರ: ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು ಗೊತ್ತಾ? ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ಕೊಡಲಾಗುತ್ತದೆ. ಈ ವರ್ಷವೂ ಭಾಗವಹಿಸಲು ಅವಕಾಶ ಕೊಡಿ ಅಂತ ಕೇಳುತ್ತೇವೆ. …
Read More »ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಬೆಳಗಾವಿವರೆಗೂ ವಿಸ್ತರಣೆ
ಬೆಂಗಳೂರು ಮತ್ತು ಧಾರವಾಡ ನಡುವೆ ಮಾರ್ಚ್- ಏಪ್ರಿಲ್ ನಲ್ಲಿ ಸಂಚಾರ ಆರಂಭಿಸಲಿರುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಣೆ ಆಗಲಿದೆ. ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಹುಬ್ಬಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 22 ಹೊಸತು ಸೇರಿದಂತೆ 210 ಕಿ.ಮೀ. ರೈಲು ಜೋಡಿ ಮಾರ್ಗ ಸಂಪೂರ್ಣಗೊಂಡಿದೆ. ಬೆಳಗಾವಿ ನಡುವಿನ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಕೂಡಲೇ ವಂದೇ ಭಾರತ್ ರೈಲನ್ನು …
Read More »ಸರ್ಕಾರಕ್ಕೆ ಬಿಸಿ ತುಪ್ಪವಾದ ಪಂಚಮಸಾಲಿ ಸಮುದಾಯದ ಗಡುವು: ವಚನಾನಂದ ಶ್ರೀ ಮೊರೆ ಹೋದರಾ ಬಿಜೆಪಿ ನಾಯಕರು..?
ಬೆಂಗಳೂರು: ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಹೊಸ ಪ್ರವರ್ಗ ರಚಿಸಿ ಮೀಸಲಾತಿ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ನಡೆ ಅನುಸರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಸಮುದಾಯ ಮತ್ತೊಮ್ಮೆ ಸವಾಲಾಗಿ ನಿಂತಿದೆ. ಅನಿರೀಕ್ಷಿತವಾಗಿ ಎದುರಾದ ಸಂಕಷ್ಟ ಕುರಿತು ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿರುವ ಸಿಎಂ, ವಚನಾನಂದ ಶ್ರೀಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಪಂಚಮಸಾಲಿ …
Read More »ನಿರಾಣಿ VS ಯತ್ನಾಳ್ | ತಾಕತ್ತಿದ್ರೆ ನಿರಾಣಿ ಸಿ.ಡಿ ಹೊರತರಲಿ; ಸವಾಲೆಸೆದ ಯತ್ನಾಳ್
ವಿಜಯಪುರ: ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ಇದೀಗ ಸಿ.ಡಿ ವಾರ್ ಶುರುವಾಗಿದೆ. ಇಂದು(ಜ.07) ಬೆಳಗ್ಗೆಯಷ್ಟೇ ಸಚಿವ ನಿರಾಣಿ ವಿಜಯಪುರ ನಗರ ಶಾಸಕ ಯತ್ನಾಳ ವಿರುದ್ದ ವಾಗ್ದಾಳಿ ನಡೆಸಿದ್ದರು. ಸಚಿವ ನಿರಾಣಿ ಮಾತನಾಡುತ್ತಾ, ಸಿಡಿ ವಿಚಾರವೆಲ್ಲ ನಮಗೆ ಗೊತ್ತಿಲ್ಲ. ದಿನದ 24 ಗಂಟೆ ಜನರ ಸೇವೆ ಮಾಡಲು ಸಮಯವೇ ಸಿಗಲ್ಲ. ಅಂಥದರಲ್ಲಿ ನಾವೆಲ್ಲಿ ಸಿ.ಡಿ ಮಾಡೋದು. ಅದೇನಿದ್ದರು ಅವರದ್ದೇ ವಿಚಾರ. ಹಾಗಿದ್ದವರು ಸ್ಟೇ ತರಬೇಕಿತ್ತು …
Read More »ಹೃದಯ ವಿದ್ರಾವಕ ಘಟನೆ: ಹೆತ್ತ ಕಂದಮ್ಮಗಳನ್ನು ಬಾವಿಗೆ ತಳ್ಳಿ ವ್ಯಕ್ತಿ ಆತ್ಮಹತ್ಯೆ!
ಕಲಬುರಗಿ: ಆ ದಂಪತಿ ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರು ಮುದ್ದಾದ ಮಕ್ಕಳಿದ್ದರು. ಆದರೆ ಪತ್ನಿಗೆ ವಕ್ಕರಿಸಿದ ಅನಾರೋಗ್ಯ ಇಡೀ ಕುಟುಂಬದ ಖುಷಿಯನ್ನೇ ಸರ್ವನಾಶ ಮಾಡಿದೆ. ಸಾಲ ಸೂಲ ಮಾಡಿ ಆಸ್ಪತ್ರೆಗೆ ತೋರಿಸಿದರು ಆರೋಗ್ಯ ಸುಧಾರಿಸಿರಲಿಲ್ಲ. ಸಾಲ ಬೆಳೆಯಿತು ಹೊರತಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಜಿಗುಪ್ಸೆಗೆ ಒಳಗಾದ ವ್ಯಕ್ತಿ ಮಾಡಿದ್ದು ಮಾತ್ರ ಮನಕಲಕುವ ಕೃತ್ಯ. ಒಂದೆಡೆ ಹೆಚ್ಚಾದ ಸಾಲ, ಇನ್ನೊಂದೆಡೆ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ .
ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …
Read More »ವಿಜಯಪುರ: ಜನವರಿ 8ರಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ
ವಿಜಯಪುರ: ಜನವರಿ 5ರ ಗುರುವಾರ ಸೂರ್ಯೋದಯಕ್ಕೂ ಮುನ್ನ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ಅಂತ್ಯಕ್ರಿಯೆ ಸ್ಥಳದಿಂದ ಸಂಗ್ರಹಿಸಲಾಯಿತು. ಸಂಗ್ರಹಿಸಿದ ಚಿತಾಭಸ್ಮವನ್ನು ಕೃಷ್ಣ ತ್ರಿವೇಣಿ ಸಂಗಮ, ಕೂಡಲಸಂಗಮ ಹಾಗೂ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ. ಶೇಖರಿಸಿದ ಚಿತಾಭಸ್ಮವನ್ನು ನಾಲ್ಕು ನದಿಗಳು ಮತ್ತು ದೇಶದ ಒಂದು ಸಾಗರದಲ್ಲಿ ಮುಳುಗಿಸಲು ನಿರ್ಧರಿಸಲಾಗಿದೆ. ಕೃಷ್ಣಾದಲ್ಲಿ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಕೂಡಲಸಂಗಮದಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಗೋಕರ್ಣದಲ್ಲಿ ಚಿತಾಭಸ್ಮವನ್ನು …
Read More »ವಿಜಯಪುರ: ಜನವರಿ 8ರಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ
ವಿಜಯಪುರ: ಜನವರಿ 5ರ ಗುರುವಾರ ಸೂರ್ಯೋದಯಕ್ಕೂ ಮುನ್ನ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ಅಂತ್ಯಕ್ರಿಯೆ ಸ್ಥಳದಿಂದ ಸಂಗ್ರಹಿಸಲಾಯಿತು. ಸಂಗ್ರಹಿಸಿದ ಚಿತಾಭಸ್ಮವನ್ನು ಕೃಷ್ಣ ತ್ರಿವೇಣಿ ಸಂಗಮ, ಕೂಡಲಸಂಗಮ ಹಾಗೂ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ. ಶೇಖರಿಸಿದ ಚಿತಾಭಸ್ಮವನ್ನು ನಾಲ್ಕು ನದಿಗಳು ಮತ್ತು ದೇಶದ ಒಂದು ಸಾಗರದಲ್ಲಿ ಮುಳುಗಿಸಲು ನಿರ್ಧರಿಸಲಾಗಿದೆ. ಕೃಷ್ಣಾದಲ್ಲಿ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಕೂಡಲಸಂಗಮದಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಗೋಕರ್ಣದಲ್ಲಿ ಚಿತಾಭಸ್ಮವನ್ನು …
Read More »