Breaking News

– ಸಾವಿನಲ್ಲೂ ಒಂದಾದ ತಾಯಿ,ಮಗ

Spread the love

ಹಾವೇರಿ: ಅನಾರೋಗ್ಯದಿಂದ ಮೃತಪಟ್ಟ ಮಗನ ನೆನಪಲ್ಲಿ ಕಣ್ಣೀರು ಹಾಕಿ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

ಮೈನಾವತಿ ತೆಪ್ಪದ (52) ಮತ್ತು ಬಸವರಾಜ್ ತೆಪ್ಪದ (31) ಮೃತ ತಾಯಿ-ಮಗ. ಗುರುವಾರ ರಾತ್ರಿ ಬಸವರಾಜ್ ಅನಾರೋಗ್ಯದಿಂದ ಮೃತಪಟ್ಟಿದ್ದನು. ಮಗನ ಸಾವಿನ ದುಃಖದಲ್ಲಿ ತಾಯಿ ಮೈನಾವತಿ ರಾತ್ರಿಯಿಡೀ ಕಣ್ಣೀರು ಹಾಕಿದ್ದಾರೆ. ಪರಿಣಾಮ ಇಂದು ಬೆಳಿಗ್ಗೆ ಹೃದಯಾಘಾತವಾಗಿ ತಾಯಿಯೂ ಮೃತಪಟ್ಟಿದ್ದಾರೆ.

ಮೃತ ಮೈನಾವತಿಗೆ ನಾಲ್ವರು ಮಕ್ಕಳಿದ್ದು, ಮೂವರು ಹೆಣ್ಣು ಮಕ್ಕಳು, ಬಸವರಾಜ್ ಒಬ್ಬನೇ ಮಗನಿದ್ದನು. ಮನೆಯ ಜವಾಬ್ದಾರಿಯನ್ನು ಮಗ ಬಸವರಾಜ್ ನೋಡಿಕೊಳ್ಳುತ್ತಿದ್ದನು. ಬಸವರಾಜ್​​ಗೆ ಇನ್ನೂ ಮದುವೆಯಾಗಿರಲ್ಲಿ. ಆದರೆ ಕೆಲವು ದಿನಗಳಿಂದ ಬಸವರಾಜ್ ಜಾಂಡೀಸ್​ನಿಂದ ಬಳಲುತ್ತಿದ್ದನು. ಹೀಗಾಗಿ ಗುರುವಾರ ಹೃದಯಘಾತವಾಗಿ ಮೃತಪಟ್ಟಿದ್ದಾನೆ. ಸಾವಿನಲ್ಲೂ ಒಂದಾದ ತಾಯಿ ಮಗನ ಪ್ರೀತಿಗೆ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ವ್ಯಕ್ತಿ

Spread the loveಹಾವೇರಿ, ಜೂನ್​ 26: ಸರ್ಕಾರಿ ನೌಕರನಿಗೆ ಲಂಚ (bribe) ನೀಡಲು ಸಂತ್ರಸ್ತ ವ್ಯಕ್ತಿ ತಮ್ಮ ಪತ್ನಿಯ ಮಾಂಗಲ್ಯ  ಸರವನ್ನು (Mangalsutra) ಅಡವಿಟ್ಟ ಘಟನೆಯೊಂದು ಹಾವೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ