ನಿಪ್ಪಾಣಿ: ಕೆನರಾ ಬ್ಯಾಂಕ್ ರೈತರಿಗೆ ಬೆಳೆ ಸಾಲ, ಕೃಷಿ ಯಾಂತ್ರೀಕರಣ, ಟ್ರ್ಯಾಕ್ಟರ್, ನೀರಾವರಿ ಪಂಪ್ಸೆಟ್ ಮತ್ತು ಹೈಟೆಕ್ ಕೃಷಿ ಉಪಕರಣಗಳ ಖರೀದಿಗೆ, ಪಶುಸಂಗೋಪನೆ (ಕುರಿ, ಮೇಕೆ, ಕೋಳಿ), ರೇಷ್ಮೆ ಕೃಷಿ ಮತ್ತು ಭೂಮಿ ಅಭಿವೃದ್ಧಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತದೆ.
ಜತೆಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕೂಡ ನೀಡುತ್ತದೆ ಎಂದು ಕೆನರಾ ಬ್ಯಾಂಕ್ ಆರ್ಜಿಎಂ ಪನಿಶಯನ್ ಎಂ. ಹೇಳಿದರು.
ಜೊಲ್ಲೆ ಗ್ರುಪ್ ವತಿಯಿಂದ ಮತ್ತು ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳದ 4ನೆಯ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಬ್ಯಾಂಕ್ ಕೃಷಿ ಸಾಲಗಳ ವ್ಯವಸ್ಥಾಪಕ ಅನೀಲ ಮ್ಹೆತ್ರೆ, ನಿಪ್ಪಾಣಿ ಶಾಖೆ ವ್ಯವಸ್ಥಾಪಕ ಶ್ರಿಕಾಂತ, ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಜಯವಂತ ಭಾಟಲೆ, ಪ್ರಕಾಶ ಶಿಂಧೆ, ಸಮೀತ ಸಾಸನೆ, ಶರದ ಜಂಗಟೆ, ಸುಹಾಸ ಗೂಗೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಇದ್ದರು. ಜೊಲ್ಲೆ ಗ್ರುಪ್ನ ಇವೆಂಟ್ ಡೈರೆಕ್ಟರ್ ವಿಜಯ ರಾವುತ ಸ್ವಾಗತಿಸಿದರು. ಅನಿಲ ಶಿಂಧೆ ನಿರೂಪಿಸಿದರು. ಕಾರ್ಖಾನೆಯ ಅಧಿಕ್ಷಕ ಗಜಾನನ ರಾಮನಕಟ್ಟಿ ವಂದಿಸಿದರು.
Laxmi News 24×7