Breaking News

ಕಾಂಗ್ರೆಸ್​ ಮೂರನೇ ಪಟ್ಟಿ ರಿಲೀಸ್​: ಲಕ್ಷ್ಮಣ್​ ಸವದಿಗೆ ಟಿಕೆಟ್​.. ಸಿದ್ದರಾಮಯ್ಯಗೆ ಕೋಲಾರ ಮಿಸ್​

Spread the love

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಬಹುನಿರೀಕ್ಷಿತ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

43 ಅಭ್ಯರ್ಥಿಗಳನ್ನು ಹೆಸರನ್ನು ಅಖೈರು ಮಾಡಲಾಗಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ವರುಣ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್​ ನೀಡಲಾಗಿಲ್ಲ.

Image

ಕೋಲಾರದಿಂದ ಕೊತ್ತೂರು ಜಿ.ಮಂಜುನಾಥ್​ಗೆ ಟಿಕೆಟ್​ ನೀಡಲಾಗಿದೆ. ಬಿಜೆಪಿಗೆ ರಾಜೀನಾಮೆ ನೀಡ ನಿನ್ನೆಯಷ್ಟೇ ಕಾಂಗ್ರೆಸ್​ ಸೇರಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಅಥಣಿ ಟಿಕೆಟ್​ ನೀಡಲಾಗಿದೆ. ಇದಲ್ಲದೇ, ಜೆಡಿಎಸ್​ಗೆ ಗುಡ್​ಬೈ ಹೇಳಿರುವ ಶಾಸಕ ಶಿವಲಿಂಗೇಗೌಡರಿಗೆ ಅರಸೀಕೆರೆಯಿಂದ ಕಣಕ್ಕಿಳಿಸಲಾಗಿದೆ. ಮೂರನೇ ಪಟ್ಟಿಯಲ್ಲೂ ವಲಸಿಗರಿಗೆ ಮಣೆ ಹಾಕಲಾಗಿದೆ.

 

 

ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು: ದಾಸರಹಳ್ಳಿ ಕ್ಷೇತ್ರಕ್ಕೆ ಧನಂಜಯ, ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್, ಕೃಷ್ಣರಾಜ- ಎಂ.ಕೆ‌ ಸೋಮಶೇಕರ್, ಅಥಣಿ- ಲಕ್ಷಣ್ ಸವದಿ, ತೇರದಾಳ- ಸಿದ್ದಪ್ಪ ರಾಮಪ್ಪ ಕೊಣ್ಣೂರ್​, ಶಿಖಾರಿಪುರ-ಗೋಣಿ ಮಾಲ್ತೇಶ್, ತರಿಕೆರೆ- ಶ್ರೀನಿವಾಸ್, ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ್, ಬೊಮ್ಮನಹಳ್ಳಿ- ಉಮಾಪತಿ ಗೌಡ, ಅರಸೀಕೆರೆ- ಶಿವಲಿಂಗೇಗೌಡ, ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್, ಮೂಡಿಗೆರೆ- ನಯನಾ ಮೋಟಮ್ಮ, ಶಿವಮೊಗ್ಗ-ಯೋಗೇಶ್, ಮದ್ದೂರು- ಉದಯ್ ಗೌಡ, ನವಲಗುಂದ- ಕೋನರೆಡ್ಡಿ, ಬಳ್ಳಾರಿ ನಗರ- ಭರತ್ ರೆಡ್ಡಿ.

ಟಿಕೆಟ್​ ಸಿಗದ ಪ್ರಮುಖರು: ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಭಾರಿ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಾಣ ಮಾಡಿದ್ದ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿಗೆ ಇನ್ನೂ ಟಿಕೆಟ್​ ಘೋಷಿಸಿಲ್ಲ. ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಪೆಂಡಿಂಗ್ ಇಡಲಾಗಿದೆ. ಅಲ್ಲದೆ, ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ, ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಅವರಿಗೂ ಸಹ ಟಿಕೆಟ್​ ಘೋಷಣೆ ಆಗಿಲ್ಲ

ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು: ದಾಸರಹಳ್ಳಿ ಕ್ಷೇತ್ರಕ್ಕೆ ಧನಂಜಯ, ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್, ಕೃಷ್ಣರಾಜ- ಎಂ.ಕೆ‌ ಸೋಮಶೇಕರ್, ಅಥಣಿ- ಲಕ್ಷಣ್ ಸವದಿ, ತೇರದಾಳ- ಸಿದ್ದಪ್ಪ ರಾಮಪ್ಪ ಕೊಣ್ಣೂರ್​, ಶಿಖಾರಿಪುರ-ಗೋಣಿ ಮಾಲ್ತೇಶ್, ತರಿಕೆರೆ- ಶ್ರೀನಿವಾಸ್, ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ್, ಬೊಮ್ಮನಹಳ್ಳಿ- ಉಮಾಪತಿ ಗೌಡ, ಅರಸೀಕೆರೆ- ಶಿವಲಿಂಗೇಗೌಡ, ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್, ಮೂಡಿಗೆರೆ- ನಯನಾ ಮೋಟಮ್ಮ, ಶಿವಮೊಗ್ಗ-ಯೋಗೇಶ್, ಮದ್ದೂರು- ಉದಯ್ ಗೌಡ, ನವಲಗುಂದ- ಕೋನರೆಡ್ಡಿ, ಬಳ್ಳಾರಿ ನಗರ- ಭರತ್ ರೆಡ್ಡಿ.

ಟಿಕೆಟ್​ ಸಿಗದ ಪ್ರಮುಖರು: ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಭಾರಿ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಾಣ ಮಾಡಿದ್ದ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿಗೆ ಇನ್ನೂ ಟಿಕೆಟ್​ ಘೋಷಿಸಿಲ್ಲ. ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಪೆಂಡಿಂಗ್ ಇಡಲಾಗಿದೆ. ಅಲ್ಲದೆ, ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ, ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಅವರಿಗೂ ಸಹ ಟಿಕೆಟ್​ ಘೋಷಣೆ ಆಗಿಲ್ಲ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ