ಸರಕಾರಕ್ಕೆ ಮತ್ತು ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ದರೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಿಲ್ಲಿಸಲಿ, ನಾವು ಮೌನವಾಗಿರುವುದನ್ನು ಅವರು ದೌರ್ಬಲ್ಯವೆಂದು ಪರಿಗಣಿಸಿರುವಂತಿದೆ. ಸಮಾಜಘಾತುಕ ಶಕ್ತಿಗಳು ಕರಪತ್ರಗಳನ್ನು ಹಂಚಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಯಾವ ಸಂವಿಧಾನವನ್ನು ಇವರು ಅನುಸರಿಸುತ್ತಾರೆ ಮತ್ತು ಗೌರವಿಸುತ್ತಾರೆ? ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಡಾ ಬಿ ಅರ್ ಅಂಬೇಡ್ಕರ್ ಅವರು ಜಯಂತಿಯನ್ನು ಯಾಕೆ ಆಚರಿಸುತ್ತಾರೆ? ಎಂದು ಕುಮಾರಸ್ವಾಮಿಯವರು ಕೋಪದಿಂದ ಕುದಿಯುತ್ತಾ ಹೇಳಿದರು.
ನನಗೆ ವೋಟು ಮುಖ್ಯವಲ್ಲ, ಜನ ಶಾಂತಿ ಮತ್ತು ಸಮಾಧಾನದಿಂದ ಜೀವನ ನಡೆಸುವುದು ನನಗೆ ಬೇಕಾಗಿದೆ. ಈ ಜನ ಕೇಸರಿ ಬಟ್ಟೆ ತೊಟ್ಟು ಜನರ ನಡುವೆ ವಿಷಬೀಜ ಬಿತ್ತಿ ಅವರ ಬದುಕನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಇನ್ನು ನಾನು ಮೌನವಾಗಿರಲ್ಲ. ಕಾಂಗ್ರೆಸ್ ಪಕ್ಷದವರು ಮಾತಾಡುವುದಿಲ್ಲ, ಮಾತಾಡಿದರೆ ಹಿಂದೂ ವೋಟುಗಳು ಹೋಗಿ ಬಿಡುತ್ತವೆ ಎನ್ನುವ ಭೀತಿ ಅವರನ್ನು ಆವರಿಸಿದೆ. ಮಾತಾಡುವ ಧೈರ್ಯ ಅವರು ಕಳೆದುಕೊಂಡಿದ್ದಾರೆ. ಆದರೆ ನನಗೆ ಜನರ ಬದುಕು ಮುಖ್ಯ ಎಂದು ಗುಡುಗುತ್ತಾರೆ ಕುಮಾರಸ್ವಾಮಿ.