Breaking News

ನಡುರಸ್ತೆಯಲ್ಲಿ ಧಗಧಗಿಸಿ ಹೊತ್ತಿ ಉರಿದ ಬಿಎಂಟಿಸಿ ಬಸ್, ತಪ್ಪಿದ ಭಾರೀ ಅನಾಹುತ

Spread the love

ಬೆಂಗಳೂರು: ದೀಪಾಂಜಲಿನಗರದ ಡಿಪೋಗೆ ಸೇರಿದಂತ BMTC ಬಸ್ಸೊಂದು ( BMTC Bus ) ಕೆ ಆರ್ ಮಾರುಕಟ್ಟೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ( Fire ) ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದಿರೋ ಘಟನೆ, ಇಂದು ನಡೆದಿದೆ.

ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಡದ ಬಳಿಯಲ್ಲಿ ತೆರಳುತ್ತಿದ್ದಂತ ಬಿಎಂಟಿಸಿ ಬಸ್ಸೊಂದು, ಕೆ ಆರ್ ಮಾರುಕಟ್ಟೆಗೆ ತೆರಳುತ್ತಿದ್ದಂತ ವೇಳೆ, ಕಾಣಿಸಿಕೊಂಡಂತ ಬೆಂಕಿಯಿಂದಾಗಿ ಧಗಧಗಿಸಿ ಹೊತ್ತಿ ಉರಿದಿದೆ. ಕೂಡಲೇ ಅಲ್ಲೇ ಇದ್ದಂತ ಮಹಾನಗರ ಪಾಲಿಕೆಯ ಕಸದ ವಾಹನದಿಂದ ನೀರಿನಿಂದ ಬೆಂಕಿ ನಂದಿಸೋ ಕಾರ್ಯವನ್ನು ನಡೆಸಲಾಯಿತು. ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಕಾರಣ, ಮುಂದಾಗಲಿದ್ದ ಭಾರೀ ಅನಾಹುತ ತಪ್ಪಿದೆ.


Spread the love

About Laxminews 24x7

Check Also

ಉತ್ತರ ಕನ್ನಡದಲ್ಲಿ ಹೆಚ್ಚಿದ ಚಿರತೆಗಳ ಓಡಾಟ

Spread the loveಕಾರವಾರ (ಉತ್ತರ ಕನ್ನಡ): ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಹಲವೆಡೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಿರಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ